Advertisement

ಜೆಡಿಎಸ್‌ಗೆ ವಿಶ್ವನಾಥ್‌ ಸಾರಥಿ;ನಗರ ಪಾಲಿಕೆ ಚುನಾವಣೆಗೆ ಮೈತ್ರಿ ಇಲ್ಲ

05:04 PM Aug 05, 2018 | Team Udayavani |

ಬೆಂಗಳೂರು: ಜೆಡಿಎಸ್‌ ನೂತನ ಸಾರಥಿಯಾಗಿ ಮಾಜಿ ಸಚಿವ , ಶಾಸಕ ಎಚ್‌.ವಿಶ್ವನಾಥ್‌ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದು ಭಾನುವಾರ ಅಧಿಕಾರ ಸ್ವೀಕರಿಸಿದ್ದಾರೆ.

Advertisement

ಜೆ.ಪಿ.ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಸಮ್ಮುಖದಲ್ಲಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು  ಪಕ್ಷದ ಧ್ವಜವನ್ನು ವಿಶ್ವನಾಥ್‌ ಅವರಿಗೆ ನೀಡಿ ಅಧಿಕಾರ ಹಸ್ತಾಂತರಿಸಿದರು. 

ಕುರುಬ ಸಮಾಜದ ಮುಖಂಡರಾಗಿರುವ ವಿಶ್ವನಾಥ್‌ ಅವರು ಕಳೆದ ಚುನಾವಣೆ ವೇಳೆ ಅಂದಿನ ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದು ಮಾತೃ ಪಕ್ಷ ಕಾಂಗ್ರೆಸ್‌ ತೊರೆದು ಜೆಡಿಎಸ್‌ ಸೇರಿದ್ದರು. ಹುಣಸೂರಿನಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಸಚಿವ ಸಂಪುಟ ಸೇರ್ಪಡೆ ನಿರೀಕ್ಷೆ ಇರಿಸಿದ್ದ ಅವರು ನಿರಾಶರಾಗಿದ್ದರು. 

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ  ಕಾಂಗ್ರೆಸ್‌ನೊಂದಿಗೆ ನಾವು ಮೈತ್ರಿ ಮಾಡಿ ಕೊಳ್ಳುವುದಿಲ್ಲ, ಏಕಾಂಗಿಯಾಗಿಯೇ  ಸ್ಪರ್ಧಿಸುತ್ತೇವೆ .ಸಂಘರ್ಷವಿಲ್ಲದೆ ಚುನಾವಣೆ ನಡೆಸುತ್ತೇವೆ ಎಂದರು. 

ಜೆಡಿಎಸ್‌ಗೆ ಹೊಸದಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತೇವೆ. ಯುವಕರಿಗೆ, ಅತ್ಯಂತ ಹಿಂದುಳಿದವರಿಗೆ ಅಲ್ಪಸಂಖ್ಯಾತರಿಗೆ ,ವಿದ್ಯಾವಂತರಿಗೆ ಆಧ್ಯತೆ ನೀಡುವುದಾಗಿ ತಿಳಿಸಿದರು.  

Advertisement
Advertisement

Udayavani is now on Telegram. Click here to join our channel and stay updated with the latest news.

Next