Advertisement

ಹುಣಸೂರು ನಗರಸಭೆ ಪೌರಾಯುಕ್ತರಾಗಿ ರವಿಕುಮಾರ್ ಅಧಿಕಾ ರಸ್ವೀಕಾರ

04:33 PM Mar 08, 2022 | Team Udayavani |

ಹುಣಸೂರು: ಹುಣಸೂರು ನಗರಸಭೆಯ ಪೌರಾಯುಕ್ತರಾಗಿ ಕೆ.ಪಿ.ರವಿಕುಮಾರ್ ಸೋಮವಾರದಂದು  ಪ್ರಭಾರ ಪೌರಾಯುಕ್ತರಾಗಿದ್ದ ರೂಪಾರಿಂದ ಅಧಿಕಾರ ಸ್ವೀಕರಿಸಿದರು.

Advertisement

ಹಿಂದಿನ ಪೌರಾಯುಕ್ತ ರಮೇಶ್‌ರವರು ವರ್ಗಾವಣೆ ಹಿನ್ನೆಲೆಯಲ್ಲಿ ಕುಣಿಗಲ್ ಪುರಸಭೆಯ ಪೌರಾಯುಕ್ತರಾಗಿದ್ದ ರವಿಕುಮಾರ್‌ರನ್ನು ಸರಕಾರ  ಹುಣಸೂರಿಗೆ ವರ್ಗಾಯಿಸಿದೆ. ಈ ಹಿಂದೆ ಇದೇ ನಗರಸಭೆಯಲ್ಲಿ ಪರಿಸರ ಇಂಜಿನಿಯರ್ ಆಗಿ 2012-19ರವರೆಗೆ ಕಾರ್ಯನಿರ್ವಹಿಸಿದ್ದ ಇವರು, ಕೆ.ಆರ್.ನಗರ ಪುರಸಭೆಯಲ್ಲಿ  ಪರಿಸರ ಇಂಜಿನಿಯರ್ ಆಗಿದ್ದ ಇವರು ನಂತರ ಕುಣಿಗಲ್‌ನಲ್ಲಿ ಪೌರಾಯುಕ್ತರಾಗಿ ಕಾರ್ಯನಿರ್ವಹಿಸಿದ್ದರು.

ಈ ವೇಳೆ ನಗರಸಭೆ ಅಧ್ಯಕ್ಷೆ ಸೌರಭಸಿದ್ದರಾಜು, ಉಪಾಧ್ಯಕ್ಷ ದೇವನಾಯಕ, ಸದಸ್ಯರಾದ ರಮೇಶ್, ಸ್ವಾಮಿಗೌಡ, ಕೃಷ್ಣರಾಜಗುಪ್ತ, ವಿವೇಕಾನಂದ, ಔಟ್ ರಿಚ್‌ನ ಜಗದೀಶ್ ಹಾಗೂ ಸಿಬ್ಬಂದಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next