Advertisement

Hunsur ಆಕಸ್ಮಿಕ ಬೆಂಕಿಗೆ ಹೊತ್ತಿ ತಂಬಾಕು ಭಸ್ಮ: ಬ್ಯಾರನ್ ಗೂ ಹಾನಿ; ಲಕ್ಷಾಂತರ ರೂ. ನಷ್ಟ

09:41 PM Jul 21, 2024 | Team Udayavani |

ಹುಣಸೂರು: ಆಕಸ್ಮಿಕವಾಗಿ ಬೆಂಕಿ ಬಿದ್ದು ತಂಬಾಕು ಹದ ಮಾಡುವ ಬ್ಯಾರನ್‌ ಸುಟ್ಟು ಹೋಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ಹರವೆ ಗ್ರಾಮದಲ್ಲಿ ನಡೆದಿದೆ.

Advertisement

ಹುಣಸೂರು ತಾಲೂಕಿನ ಹರವೆ ಗ್ರಾಮದ ಕುಚೇಲೇಗೌಡರಿಗೆ ಸೇರಿದ ಡಬ್ಬಲ್ ಬ್ಯಾರನ್ ಗೆ ಹೊಗೆಸೊಪ್ಪು ಹದಗೊಳಿಸಲು ಬ್ಯಾರನ್ ಗೆ ಏರಿಸಿದ್ದ ವೇಳೆ ಬೆಂಕಿ ಹತ್ತಿ ದಡ್ಡ ಹೊಗೆ ಕಾಣಿಸಿಕೊಂಡಿದೆ.

ಅಕ್ಕಪಕ್ಕದ ರೈತರು ನೀರು ಹಾಯಿಸಿ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ ಮೇರೆಗೆ ಸಿಬ್ಬಂದಿಗಳು ಆಗಮಿಸಿ ಬೆಂಕಿ ಅಕ್ಕಪಕ್ಕಕ್ಕೆ ಹರಡುವುದನ್ನು ತಪ್ಪಿಸಿದರು.

ತಂಬಾಕು ಸಂಪೂರ್ಣ ಭಸ್ಮವಾಗಿದೆ. ಬ್ಯಾರನ್ ಮೇಲ್ಚಾವಣಿಗೆ ಹಾನಿಯಾಗಿದ್ದು. ಸುಮಾರು ಐದು ಲಕ್ಷರೂ ನಷ್ಟ ಉಂಟಾಗಿದೆ.

ಮನವಿ: ನಷ್ಟಕ್ಕೊಳಗಾಗಿರುವ ಕುಚೇಲೇ ಗೌಡರಿಗೆ ತಂಬಾಕು ಮಂಡಳಿವತಿಯಿಂದ ನೀಡುವ ಪರಿಹಾರ ಕೊಡಿಸುವಂತೆ ರೈತ ಮುಖಂಡ ಮೋದೂರು ಮಹೇಶ್ ಮನವಿ ಮಾಡಿದ್ದಾರೆ.

Advertisement

ಎಚ್ಚರಿಕೆ:
ತಂಬಾಕು ಹದಗೊಳಿಸುವ ವೇಳೆ ಬ್ಯಾರನ್ ಗೆ ನಿಗದಿ ಗೊಳಿಸಿದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹೊಗೆಸೊಪ್ಪು ಕಟ್ಟಬಾರದು. ಹೊಗೆಸೊಪ್ಪಿನ ಕೆಳಗೆ ಜಾಲರಿ ಅಳವಡಿಸಿಕೊಂಡಲ್ಲಿ ಬೆಂಕಿ ಅವಘಡ ಕಡಿಮೆಯಾಗಲಿದ್ದು . ರೈತರು ಎಚ್ಚರ ವಹಿಸುವಂತೆ ಹುಣಸೂರು ಅಗ್ನಿಶಾಮಕ ದಳದ ಠಾಣಾಧಿಕಾರಿ ಸತೀಶ್ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next