Advertisement

Hunsur; ಕಾಫಿ ವರ್ಕ್ಸ್ ರಸ್ತೆಯ ಮುಸ್ಲಿಂ ಕಬ್ರಸ್ಥಾನ್ ಭೂಮಿ ಗುರುಸಿಕೊಡಲು ಮನವಿ

06:03 PM Aug 27, 2023 | Team Udayavani |

ಹುಣಸೂರು: ಜಿಲ್ಲಾಧಿಕಾರಿಗಳ ಆದೇಶದಂತೆ ಸರ್ವೇಯರ್ ನೇಮಿಸಿ ಮುಸ್ಲಿಂ ಕಬ್ರಸ್ಥಾನ್ ಭೂಮಿ ಗುರುತಿಸಿಕೊಡುವಂತೆ ಮುಸ್ಲಿಂ ಸಮುದಾಯದ ಮುಖಂಡರು ಉಪವಿಭಾಗಾಧಿಕಾರಿ ರುಚಿಬಿಂದಾಲ್‌ರಿಗೆ ಮನವಿ ಸಲ್ಲಿಸಿದರು.

Advertisement

ಕಸಬಾ ಹೋಬಳಿಯ ದೊಡ್ಡ ಹುಣಸೂರು ಗ್ರಾಮದ ಸರ್ವೆ ನಂಬರ್ 243 ರ ನಗರದ ಹಳೆ ಪೋಸ್ಟ್ ಆಫೀಸ್ ರಸ್ತೆಯ ಕಾಫಿ ವರ್ಕ್ ರಸ್ತೆಯಲ್ಲಿರುವ 1 ಎಕರೆ 18 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ತಾಲೂಕಿನ ಸರ್ವೇಯರ್ ಗಳನ್ನು ನೇಮಕ ಮಾಡಿ ಮುಸ್ಲಿಂ ಸಮುದಾಯದ ಕಬ್ರಸ್ಥಾನ್ ಜಾಗವನ್ನು ಗುರುತಿಸಿ ಕೊಡಬೇಕೆಂದು ತವಕಲ್ ಮಸ್ತಾನ್ ಕಬ್ರಸ್ತಾನ್ ಕಮಿಟಿವತಿಯಿಂದ ನಗರದ ಉಪವಿಭಾಗಾಧಿಕಾರಿ ರುಚಿಬಿಂದಾಲ್‌ರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಈ ವೇಳೆ ಸಮಿತಿ ಅಧ್ಯಕ್ಷ ಇನಾಯತ್‌ ಉಲ್ಲಾಖಾನ್, ಉಪಾಧ್ಯಕ್ಷ ಫರೂಖ್ ಖಾನ್, ಕಾರ್ಯದರ್ಶಿ ಸೈಯದ್‌ ಅಹಮದ್ ಷಾ, ಸದಸ್ಯರಾದ ಬಷೀರ್ ಅಹಮದ್, ಅಹಮದ್, ಅಬ್ದುಲ್‌ ಶುಕೂರ್, ಜವಾದ್‌ಅಹಮದ್ ಷರೀಫ್, ಮಕ್ಬೂಲ್ ಷಾ, ಮಹಮ್ಮದ್ ಇರ್ಫಾನ್ ಖಾನ್, ಶಫೀವುಲ್ಲಾ, ಶಹಜಮಾ ವಕೀಲ ಶಿವಕುಮಾರ್ ಇನ್ನಿತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next