Advertisement

ಹಸಿವು ನೀಗಿಸುವುದು ದೊಡ್ಡ ಸತ್ಕರ್ಮ: ಖಾದರ್‌

10:37 AM Jan 12, 2018 | Team Udayavani |

ಮಹಾನಗರ: ಬಡ ಅಶಕ್ತ ಜನರ ಹಸಿವು ನೀಗಿಸುವ ಕಾರ್ಯ ಅತ್ಯುತ್ಕೃಷ್ಟವಾದದ್ದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್‌ ಹೇಳಿದರು. ಇತ್ತೀಚೆಗೆ ಮಂಗಳೂರು ವೆನ್ಲಾಕ್‌ ಜಿಲ್ಲಾಸ್ಪತ್ರೆಯಲ್ಲಿ ಎಂ. ಫ್ರೆಂಡ್ಸ್‌ ವತಿಯಿಂದ ಕಾರುಣ್ಯ ಯೋಜನೆಗೆ ಭೇಟಿ ನೀಡಿ ಅವರು ಮಾತನಾಡಿದರು.

Advertisement

ಎಂ. ಫ್ರೆಂಡ್ಸ್‌ ನಿರಂತರವಾಗಿ ಒದಗಿಸುತ್ತಿರುವ ಭೋಜನವನ್ನು ಸಂಸ್ಥೆಯ ಗೌರವಾಧ್ಯಕ್ಷರೂ ಆಗಿರುವ ಯು.ಟಿ. ಖಾದರ್‌ ಎಲ್ಲ ರೋಗಿಗಳ ಜೊತೆಗಾರರಿಗೆ ವಿತರಿಸುವ ಮೂಲಕ ಸರಳತೆಯನ್ನು ಮೆರೆದರು.

ಎಂ. ಫ್ರೆಂಡ್ಸ್‌ ಅಧ್ಯಕ್ಷ ಮಹಮದ್‌ ಹನೀಫ್‌ ಹಾಜಿ ಗೋಳ್ತಮಜಲು, ಪ್ರಧಾನ ಕಾರ್ಯದರ್ಶಿ ರಶೀದ್‌ ವಿಟ್ಲ, ಕೋಶಾಧಿಕಾರಿ ಅಬೂಬಕರ್‌ ನೋಟರಿ, ಉಪಾಧ್ಯಕ್ಷ ಸುಜಾ ಮಹಮದ್‌, ಆರಿಫ್‌ ಪಡುಬಿದ್ರಿ, ನಿರ್ದೇಶಕ ವಿ.ಎಚ್‌. ಅಶ್ರಫ್‌, ಆಶಿಕ್‌ ಕುಕ್ಕಾಜೆ, ಟ್ರಸ್ಟಿಗಳಾದ ಝುಬೈರ್‌, ಇರ್ಶಾದ್  ತುಂಬೆ, ಹಿದಾಯ ಫೌಂಡೇಶನ್‌ನ ತನ್ವೀರ್‌ ದುಬಾೖ, ಬಾವಾ ದುಬಾೖ, ಸಿರಾಜ್‌ ಕಿನ್ಯ, ಸತ್ತಾರ್‌ ನಂದರಬೆಟ್ಟು, ರಫೀಕ್‌ ತುಂಬೆ ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next