Advertisement

ಗೌರಿ ಚಿಂತನೆಗಳು ಸಾಯೋದಿಲ್ಲ: ಗೌರಿ ಹತ್ಯೆ ಖಂಡಿಸಿ ಪ್ರತಿರೋಧ ಸಮಾವೇಶ

01:00 PM Sep 12, 2017 | Team Udayavani |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಸೋಮವಾರ ನಾಡಿನ ವಿವಿಧ ಪ್ರಗತಿಪರ, ವಿದ್ಯಾರ್ಥಿ, ದಲಿತ, ರೈತಪರ ಸಂಘಟನೆಗಳು ಮೆಜೆಸ್ಟಿಕ್ ರೈಲ್ವಿ ನಿಲ್ದಾಣ ಬಳಿ ಬೃಹತ್ ಪ್ರತಿರೋಧ ಸಮಾವೇಶಕ್ಕೆ ಚಾಲನೆ ನೀಡಿ, ಸೆಂಟ್ರಲ್ ಕಾಲೇಜು ಮೈದಾನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಿದರು.

Advertisement

ಬೃಹತ್ ಪ್ರತಿಭಟನೆಯಲ್ಲಿ ನಾಡಿನ ವಿವಿಧ ರಾಜ್ಯದಿಂದ ಪ್ರಗತಿಪರರು, ಸಾಹಿತಿಗಳು ಪಾಲ್ಗೊಂಡಿದ್ದರು, ಖ್ಯಾತ ಪರಿಸರವಾದಿ ಮೇಧಾ ಪಾಟ್ಕರ್, ಸಿಪಿಎಂನ ಸೀತಾರಾಮ್ ಯೆಚೂರಿ, ಸ್ವಾಮಿ ಅಗ್ನಿವೇಶ್, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್, ಸೇರಿದಂತೆ ಸಿನಿಮಾ, ಕಿರುತೆರೆ, ಪ್ರಗತಿಪರ ಚಿಂತಕರು ಪ್ರತಿಭಟನಾ ರಾಲಿಯಲ್ಲಿ ಭಾಗವಹಿಸಿದ್ದರು.

ಪ್ರತಿಭಟನಾ ಜಾಥಾದಲ್ಲಿ ಸಾಯೋದಿಲ್ಲ, ಸಾಯೋದಿಲ್ಲ ಗೌರಿ ಚಿಂತನೆಗಳು ಸಾಯೋದಿಲ್ಲ. ನಾನು ಗೌರಿ ಎಂಬ ಕಪ್ಪು ಪಟ್ಟಿಕೊಂಡು ಘೋಷಣೆ ಕೂಗಿದರು.

Advertisement

Udayavani is now on Telegram. Click here to join our channel and stay updated with the latest news.

Next