Advertisement

ಭೀಕರ ರಸ್ತೆ ಅಪಘಾತ: ಮದುವೆಯಲ್ಲಿ ಜೊತೆಗಿದ್ದು ಸಾವಿನಲ್ಲೂ ಒಂದಾದ ಸ್ನೇಹಿತರು

10:45 PM Apr 20, 2022 | Team Udayavani |

ಹುಣಸೂರು : ಹರೀನಹಳ್ಳಿಗೇಟ್ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ ಆರು ಮಂದಿಯೂ ಸ್ನೇಹಿತರಾಗಿದ್ದು ಇವರು ತನ್ನ ಸ್ನೇಹಿತನ ಮದುವೆ ಕಾರ್ಯಕ್ರಮದಲ್ಲಿ ಜೊತೆಗಿದ್ದು ಸಾವಿನಲ್ಲೂ ಒಂದಾದ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.

Advertisement

ಕೊಡಗು ಜಿಲ್ಲೆಯ ಪಾಲಿಬೆಟ್ಟದ ನಿವಾಸಿಗಳಾದ ವಾಹನ ಚಾಲಕ ಸಂತೋಷ್(47), ಎಂ.ಆರ್.ಅನಿಲ್(44), ದಯಾನಂದ್ (42), ಬಾಬು(47), ರಾಜೇಶ್(42), ವಿನೀತ(33) ಮೃತರು.

ಕೀರ್ತನ(22), ಎಂಜಲಿ(14) ಫಿಲೀಪ್(65) ಮೂವರಿಗೆ ಗಂಭೀರ ಗಾಯಗಳಾಗಿದ್ದು ಅವರು ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಮ್ಮ ಸ್ನೇಹಿತರಾದ ಸದಾನಂದನ ಮದುವೆಯ ಸಂಭ್ರಮದಲ್ಲಿ ಭಾಗಿಯಾಗಿದ್ದ ಎಲ್ಲ ಸ್ನೇಹಿತರು ಬಳಿಕ ತಮ್ಮ ಊರಾದ ಕೊಡಗಿನ ವಾಪಸ್ಸಾಗುತ್ತಿದ್ದ ವೇಳೆ ಬೊಲೆರೋ ವಾಹನ ಚಾಲಕನ ನಿಯಂತ್ರಣ ಕಳೆದು ಮರಕ್ಕೆ ಡಿಕ್ಕಿ ಹೊಡೆದಿದೆ ಈ ವೇಳೆ ವಾಹನದಲ್ಲಿದ್ದ ಆರು ಮಂದಿ ಸ್ನೇಹಿತರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳದಲ್ಲಿ ತಮ್ಮ ಸ್ನೇಹಿತರನ್ನು ಕಳೆದುಕೊಂಡ ಇತರ ಸ್ನೇಹಿತರ ಗೋಳಾಟವಂತೂ ನೋಡತೀರದಾಗಿತ್ತು.

ಮಸಣಕ್ಕೆ ಹೊರಟ ಬಾವಿ ಮದುಮಗ : ಸಾವನ್ನಪ್ಪಿರುವವರ ಪೈಕಿ 33 ವರ್ಷದ ವಿನೀತನಿಗೆ ಇದೇ ಏ.24ರ ಭಾನುವಾರ ಪಾಲಿಬೆಟ್ಟದಲ್ಲಿ ಅಮ್ಮತ್ತಿಯ ಹುಡುಗಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ ವಿಧಿಯೇ ಬೇರೆಯಾಗಿತ್ತು. ಸ್ನೇಹಿತರೊಂದಿಗೆ ಅಪಘಾತದಲ್ಲಿ ಮೃತಪಟ್ಟು ಮಸಣ ಸೇರಿದ್ದರೇ ಇತ್ತ ಎರಡು ಮನೆಗಳಲ್ಲಿ ಸೂತಕದ ಛಾಯೆ ಆವರಿಸಿದೆ.

Advertisement

ಮದುಮಗನ ಗೋಳಾಟ: ತನ್ನ ಮದುವೆಗೆ ಬಂದಿದ್ದ ಸ್ನೇಹಿತರ ಸಾವಿನಿಂದ ಕಂಗಾಲಾಗಿದ್ದ ಮದುಮಗ ಪಾಲಿಬೆಟ್ಟದ ಸದಾನಂದ ಹಾಗೂ ಅವರ ಕುಟುಂಬದವರು ನಮ್ಮ ಮದುವೆಗೆ ಬಂದವರಿಗೆ ಈ ರೀತಿ ಸಾವು ಬಂತ್ತಲ್ಲಾ ಎಂದು ಗೋಳಾಡುತ್ತಿದ್ದುದ್ದು ಅಪಘಾತದ ಸ್ಥಳದಲ್ಲಿ ಕಂಡುಬಂತು.

ಇದನ್ನೂ ಓದಿ :ಪಿಎಸ್‌ಐ ನೇಮಕಾತಿ ಅಕ್ರಮ: ಗೃಹ ಸಚಿವರು ಉತ್ತರಿಸಲಿ: ದಿನೇಶ್‌ ಗುಂಡೂರಾವ್‌ ಆಗ್ರಹ

 

Advertisement

Udayavani is now on Telegram. Click here to join our channel and stay updated with the latest news.

Next