Advertisement

Hunasuru: ಸಾಕು ಪ್ರಾಣಿಗಳ ಕೊಲ್ಲುತ್ತಿದ್ದ ಚಿರತೆ ಕೂಡ್ಲೂರಲ್ಲಿ ಸೆರೆ

08:42 PM Aug 04, 2024 | Team Udayavani |

ಹುಣಸೂರು(ಮೈಸೂರು ಜಿಲ್ಲೆ) : ಸಾಕು ಪ್ರಾಣಿಗಳ ಹೊಂಚು ಹಾಕಿ ಕೊಂದು ಹಾಕುತ್ತಿದ್ದ ಸುಮಾರು 6 ವರ್ಷದ ಚಿರತೆ ಬೋನಿನಲ್ಲಿ ಬಂಧಿಯಾಗಿರುವ ಘಟನೆ ತಾಲೂಕಿನ ಕೂಡ್ಲೂರಿನಲ್ಲಿ ನಡೆದಿದೆ.

Advertisement

ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ನಾಯಿ, ಆಡು ಸೇರಿ ಸಾಕು ಪ್ರಾಣಿಗಳ ಕೊಂದು ಹೊತ್ತೊಯ್ಯುತ್ತಿತ್ತು. ಶನಿವಾರ ಗ್ರಾಮದ ವಿನ್ಸೆಂಟ್‌ರಿಗೆ ಸೇರಿದ ಜಮೀನಿನಲ್ಲಿ ಕರುವನ್ನು ಕೊಂದು ಹಾಕಿತ್ತು. ವಿನ್ಸೆಂಟ್ ನೀಡಿದ ಮಾಹಿತಿ ಮೇರೆಗೆ ಅರಣ್ಯ ಇಲಾಖೆಯ ಪ್ರಾದೇಶಿಕ ವಿಭಾಗದ ಆರ್.ಎಫ್ ಒ. ನಂದಕುಮಾರ್, ಡಿ.ಆರ್.ಎಫ್.ಒ. ಮಲ್ಲಿಕಾರ್ಜುನ್ ಭೇಟಿ ನೀಡಿ ಪರಿಶೀಲನೆ ನಡೆಸಿ ಬೋನ್ ಇರಿಸಿದ್ದರು. ಶನಿವಾರ ರಾತ್ರಿ ಬೋನಿನಲ್ಲಿರಿಸಿದ್ದ ನಾಯಿಯ ತಿನ್ನುವ ಆಸೆಯಿಂದ ಒಳಹೊಕ್ಕಿದ ಚಿರತೆ ಬೋನಿನಲ್ಲಿ ಬಂಧಿಯಾಗಿದೆ.

ಸೆರೆ ಸಿಕ್ಕ ಸುಮಾರು 6 ವರ್ಷ ಪ್ರಾಯದ ಗಂಡು ಚಿರತೆಯ ಡಿ.ಆರ್.ಎಫ್.ಓ.ಮಲ್ಲಿಕಾರ್ಜುನ್ ನೇತೃತ್ವದಲ್ಲಿ ಸಿಬ್ಬಂದಿಗಳು  ನಾಗರಹೊಳೆ ಉದ್ಯಾನದಲ್ಲಿ ಬಂಧಮುಕ್ತಗೊಳಿಸಲಾಗಿದೆ ಎಂದು ಆರ್.ಎಫ್.ಓ. ನಂದಕುಮಾರ್ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next