Advertisement

ಹುಣಸೂರು : ಮುಂದುವರೆದ ಮಳೆ ಆರ್ಭಟ, ಹಲವು ಬಡಾವಣೆ ಜಲಾವೃತ

08:31 AM Oct 12, 2022 | Team Udayavani |

ಹುಣಸೂರು : ತಾಲೂಕಿನಾದ್ಯಂತ ಗುಡುಗು ಸಿಡಿಲು ಸಹಿತ ಗಂಟೆಕಾಲ ಸುರಿದ ಜಡಿ ಮಳೆಗೆ ಹಲವು ಬಡಾವಣೆ ಜಲಾವೃತಗೊಂಡಿದೆ.

Advertisement

ನಗರದ ಮಂಜುನಾಥ್ ಬಡಾವಣೆ. ಸಾಕೇತ ಬಡಾವಣೆ. ಶಬ್ಬೀರ್ ನಗರ. ಬನ್ನಿ ಬೀದಿಯಲ್ಲಿ ಮಳೆ ನೀರು ಚರಂಡಿಗಳಲ್ಲಿ ತುಂಬಿ. ರಸ್ತೆ ಮೇಲೆ ಹರಿದಿದೆ. ತಗ್ಗು ಪ್ರದೇಶದ ಮನೆಯೊಳಕ್ಕೂ ನೀರು ತುಂಬಿಕೊಂಡಿದ್ದ ಮಳೆ ನಿಂತು ಎರಡು ಗಂಟೆಗಳ ಕಾಲವಾದರೂ ನೀರು ಕಡಿಮೆಯಾಗಿಲ್ಲ.
ಮನೆಯಲ್ಲಿದ್ದ ದವಸ ಧಾನ್ಯ. ಬಟ್ಟೆಗಳು ಬೆಲೆ ಬಾಳುವ ವಿದ್ಯುತ್ ಉಪಕರಣ. ಬಟ್ಟೆ ಒಗೆಯುವ ಯಂತ್ರಗಳಿಗೆ ನೀರು ಸೇರಿ ಉಪಯೋಗಿಸಲಾರದಂತಾಗಿದೆ.

ಇನ್ನುಬಾರೀ ಮಳೆಯಿಂದಾಗಿ ಮೈಸೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥವಾಗಿದ್ದರೆ . ಶಬ್ಬೀರ್ ನಗರದಲ್ಲಿ ಪ್ರವಾಹದಂತೆ ರಸ್ತೆಯಲ್ಲಿ ಗಂಟೆಗೂ ಹೆಚ್ಚು ಕಾಲ ನೀರು ಹರಿಯುತ್ತಲೆ ಇತ್ತು. ಲಕ್ಷಾಂತರ ರೂ ನಷ್ಟ ಸಂಭವಿಸಿದೆ.

ಇದನ್ನೂ ಓದಿ : ಹುಣಸೂರು : ಗೋಕುಲ ರಸ್ತೆ ಏಕಮುಖ ಸಂಚಾರಕ್ಕೆ ಜಿಲ್ಲಾಧಿಕಾರಿ ಆದೇಶ

Advertisement

Udayavani is now on Telegram. Click here to join our channel and stay updated with the latest news.

Next