Advertisement

ಖಾತ್ರಿ ಯೋಜನೆಯಡಿ ಕೆಲಸ

01:18 PM May 15, 2020 | Naveen |

ಹುಣಸಗಿ: ಗೋವಾ-ಮಹಾರಾಷ್ಟ್ರ ರಾಜ್ಯದಿಂದ ಗುಳೆ ಕಾರ್ಮಿಕರು ಈಗಾಗಲೇ ಸುರಪುರ ಕ್ಷೇತ್ರದಲ್ಲಿ ಬಂದಿದ್ದಾರೆ. ಅವರಿಗೆ ಉದ್ಯೋಗ ಚೀಟಿ ಕೊಡಿಸಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಕೊಡಲು ಪಂಚಾಯತ್‌ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ನರಸಿಂಹನಾಯಕ (ರಾಜುಗೌಡ) ತಿಳಿಸಿದ್ದಾರೆ.

Advertisement

ಈ ಕುರಿತು ಪ್ರಕಟಣೆ ನೀಡಿರುವ ಅವರು, ಅನ್ಯ ರಾಜ್ಯಗಳಿಗೆ ಗುಳೆ ಹೋಗಿದ್ದ ಕಾರ್ಮಿಕರು ಲಾಕ್‌ ಡೌನ್‌ನಿಂದ ಅಲ್ಲಿಂದ ಬರಲಾಗದೇ ಸಮಸ್ಯೆ ಎದುರಿಸುತ್ತಿದ್ದರು. ಅವರ ಪರಿಸ್ಥಿತಿ ಮನಗೊಂಡು ಸ್ವಂತ ಖರ್ಚಿನಲ್ಲಿ 10 ಬಸ್‌ಗಳ ಸೌಕರ್ಯ ಕಲ್ಪಿಸಿ ಕಾರ್ಮಿಕರನ್ನು ಕರೆ ತರಲಾಗಿದೆ. ಇಂಥವರಿಗೆ ನರೇಗಾದಲ್ಲಿ ಉದ್ಯೋಗ ಒದಗಿಸಲಾಗುವುದು ಎಂದರು.

ಸುಮಾರು 800ಕ್ಕೂ ಹೆಚ್ಚು ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದೆ. ನಂತರ ಅವರು ತಮ್ಮ ಸ್ವ-ಗ್ರಾಮಗಳಿಗೆ ತೆರಳಿದಾಗ ಕೆಲಸವಿಲ್ಲದೆ ಕಷ್ಟವಾಗುತ್ತದೆ. ಈ ಸಮಸ್ಯೆ ತಪ್ಪಿಸಲು ಉದ್ಯೋಗ ಖಾತ್ರಿ ಯೋಜನೆಯಡಿ ಅನುಕೂಲ ಕಲ್ಪಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಕ್ಷೇತ್ರದಲ್ಲಿ ಈಗಾಗಲೇ ಕ್ವಾರಂಟೈನ್‌ ಮುಗಿದ ಬಹುತೇಕ ಕಾರ್ಮಿಕರು ಗ್ರಾಪಂ ವತಿಯಿಂದ ಉದ್ಯೋಗ ಖಾತ್ರಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಚೀಟಿ ಹೊಂದಿರದವರಿಗೆ ಜಾಬ್‌ ಕಾರ್ಡ್‌ ನೀಡಲು ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next