Advertisement

ಹುಲಿಯೂರುದುರ್ಗ: ಕರಡಿ ದಾಳಿಗೆ ಯುವ ರೈತ ಬಲಿ

06:46 PM Dec 14, 2022 | Team Udayavani |

ಕುಣಿಗಲ್ : ಕರಡಿ ದಾಳಿ ನಡೆಸಿ ಯುವ ರೈತನೋರ್ವನನ್ನು ಬಲಿ ಪಡೆದಿರುವ ಘಟನೆ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಎಲೆಕಡಕಲು ಗ್ರಾಮದಲ್ಲಿ ಬುಧವಾರ ಸಂಜೆ 4.30 ರ ವೇಳೆ ನಡೆದಿದೆ. ಎಲೆಕಡಲು ರಾಜು (33) ಕರಡಿ ದಾಳಿಯಿಂದ ಮೃತಪಟ್ಟ ದುರ್ದೈವಿ ಯುವಕ.

Advertisement

 ಘಟನೆ ವಿವರ
ರಾಜು ತನ್ನ ಜಮೀನಿನಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ವೇಳೆ ಕರಡಿ ಏಕಾಏಕಿ ದಾಳಿ ಮಾಡಿ ತೀವ್ರವಾಗಿ ಗಾಯಗೊಳಿಸಿದೆ. ಕರಡಿಯ ದಾಳಿಯಿಂದ ಕಂಗಾಲಾದ ರಾಜು ಕಿರುಚಿಕೊಂಡಿದ್ದಾರೆ.  ಅಕ್ಕಪಕ್ಕದ ಜಮೀನನವರು ಘಟನಾ ಸ್ಥಳಕ್ಕೆ ಬಂದು ಕರಡಿಯನ್ನು ಓಡಿಸಿದರು. ತೀವ್ರವಾಗಿ ಗಾಯಗೊಂಡಿದ್ದ ರಾಜು ಅವರನ್ನು ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಆದಿಚುಂಚನಗಿರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಈ ಸಂಬಂಧ ಹುಲಿಯೂರುದುರ್ಗ ಅರಣ್ಯ ಸಂರಕ್ಷಣಾಧಿಕಾರಿ ಮಹಮದ್ ಮನ್ಸೂರ್ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next