Advertisement

ಸಂವಿಧಾನ ಶಿಲ್ಪಿಗೆ ನಮನ

12:57 PM Apr 15, 2020 | Naveen |

ಹುಬ್ಬಳ್ಳಿ: ನಗರದಲ್ಲಿ ಮಂಗಳವಾರ ತಾಲೂಕು ಆಡಳಿತ, ಮಹಾನಗರ ಪಾಲಿಕೆ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌.ಅಂಬೇಡ್ಕರ ಅವರ 129ನೇ ಜಯಂತಿ ಆಚರಿಸಲಾಯಿತು.

Advertisement

ತಾಲೂಕು ಆಡಳಿತದಿಂದ ತಾಪಂ ಸಭಾಭವನದಲ್ಲಿ ಡಾ|ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಶಾಸಕ ಪ್ರಸಾದ ಅಬ್ಬಯ್ಯ, ಶಹರ ಹಾಗೂ ಗ್ರಾಮೀಣ ತಹಸೀಲ್ದಾರರಾದ ಶಶಿಧರ ಮಾಡ್ಯಾಳ, ಪ್ರಕಾಶ ನಾಶಿ, ತಾಪಂ ಇಒ ಎಂ.ಎಂ.ಸವದತ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ನಂದಾ ಹಣಬರಟ್ಟಿ, ಬಿಸಿಎಂ ನಿಲಯ ಪಾಲಕ ಡಾ| ಪ್ರಹ್ಲಾದ ಗೆಜ್ಜಿ, ಶಾಂತರಾಜ ಪೋಳ, ವೆಂಕಟೇಶ ಮೇಸ್ತ್ರೀ, ವಿಜನಗೌಡ ಪಾಟೀಲ, ಯಮನೂರ ಗುಡಿಹಾಳ, ಗುರುನಾಥ ಉಳ್ಳಿಕಾಶಿ, ಪ್ರಸನ್ನ ಮಿರಜಕರ ಇನ್ನಿತರರು ಇದ್ದರು.

ಮಹಾನಗರ ಜಿಲ್ಲಾ ಕಾಂಗ್ರೆಸ್‌: ಮಹಾನಗರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಡಾ|ಬಿ.ಆರ್‌.ಅಂಬೇಡ್ಕರ್‌ ಅವರ 129ನೇ ಜಯಂತಿಯನ್ನು ಸರಳವಾಗಿ ಆಚರಿಲಾಯಿತು. ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್ ಹಳ್ಳೂರ, ಮುಖಂಡರಾದ ದೀಪಾ ಗೌರಿ, ನಾಗರಾಜ ಗೌರಿ, ನವೀದ ಮುಲ್ಲಾ, ದೊಡ್ಡರಾಮಪ್ಪ ದೊಡ್ಡಮನಿ ಇನ್ನಿತರರರಿದ್ದರು.

ಶಾಸಕರಿಂದ ಮಾಲಾರ್ಪಣೆ: ಶಾಸಕ ಪ್ರಸಾದ ಅಬ್ಬಯ್ಯ ಅವರು ಸ್ಟೇಶನ್‌ ರಸ್ತೆಯಲ್ಲಿರುವ ಡಾ|ಬಿ. ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಮುಖಂಡರಾದ ವೆಂಕಟೇಶ ಮೇಸ್ತ್ರಿ, ಪಿತಾಂಬರಪ್ಪ ಬಿಳಾರ, ವಿಜನಗೌಡ ಪಾಟೀಲ, ಯಮನೂರ ಗುಡಿಹಾಳ ಇನ್ನಿತರರು ಇದ್ದರು. ಬಿಜೆಪಿಯಿಂದ ಆಚರಣೆ: ಸ್ಟೇಶನ್‌ ರಸ್ತೆಯಲ್ಲಿರುವ ಡಾ|ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗೆ ಹು.ಧಾ.ಪೂರ್ವ ವಿಧಾನಸಭಾ ಕ್ಷೇತ್ರ ಬಿಜೆಪಿ ಘಟಕದ ಅಧ್ಯಕ್ಷ ಅಧ್ಯಕ್ಷ ಪ್ರಭು ನವಲಗುಂದಮಠ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಚಂದ್ರಶೇಖರ ಗೋಕಾಕ, ಅಣಪ್ಪ ಗೋಕಾಕ ಇನ್ನಿತರರಿದ್ದರು.

ವಾರ್ಡ್‌ 55 ರಲ್ಲಿ: ವಾರ್ಡ್‌ 55ರಲ್ಲಿ ಬರುವ ಶೀಲವಂತರ ಓಣಿಯಲ್ಲಿ ಡಾ|ಬಿ.ಆರ್‌.ಅಂಬೇಡ್ಕರ್‌ ಅವರ ಜಯಂತಿ ಆಚರಿಸಲಾಯಿತು. ಪಾಲಿಕೆ ಮಾಜಿ ಸದಸ್ಯ ಶಿವು ಮೆಣಸಿನಕಾಯಿ, ದೀಪಕ ಮೆಹರವಾಡೆ, ಮಂಜುನಾಥ ಕಾಟಕರ, ಶ್ರೀನಾಥ ಜಾಧವ ಇನ್ನಿತರರು ಇದ್ದರು.

Advertisement

ಮಾಜಿ ಸಂಸದ ಮಾಲಾರ್ಪಣೆ: ಮಾಜಿ ಸಂಸದ ಪ್ರೊ|ಐ.ಜಿ ಸನದಿ ಡಾ|ಬಿ.ಆರ್‌.ಅಂಬೇಡ್ಕರ್‌ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಶಾಕೀರ ಸನದಿ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next