ಧಾರವಾಡ : ಕಳೆದ ಮೂರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್ ಅವರನ್ನು ಬೆಂಗಳೂರಿಗೆ ಬುಧವಾರ ತಡರಾತ್ರಿ ಏರ್ ಲಿಫ್ಟ್ ಮೂಲಕ ಸ್ಥಳಾಂತರಿಸಲಾಗಿದೆ.
ಇಲ್ಲಿನ ಎಸ್ ಡಿಎಂ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಅನಾರೋಗ್ಯ ತೀವ್ರ ಸ್ವರೂಪ ಪಡೆಯಿತು. ಹೀಗಾಗಿ ಅವರನ್ನು ಏರ್ ಎಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ಮಣಿಪಾಲ ಆಸ್ಪತ್ರೆ ಗೆ ಕರೆದುಕೊಂಡು ಹೋಗಲಾಯಿತು.
ಗುರುವಾರ ಅವರ ಆರೋಗ್ಯದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದ್ದು ಸದ್ಯಕ್ಕೆ ಅವರು ಚಿಕಿತ್ಸೆ ಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಪೋಲಿಸ್ ಮೂಲಗಳು ಖಚಿತ ಪಡೆಸಿವೆ. ಅವರ ಅನಾರೋಗ್ಯ ಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ:ದೇಶೀಯತೆ ಬಿಂಬಿಸುವ ದಿರಿಸಿನಲ್ಲಿ ಟೀಂ ಇಂಡಿಯಾ ಎದುರು ಆಡಲಿದ್ದಾರೆ ಆಸೀಸ್ ಕ್ರಿಕೆಟಿಗರು
ಅಕ್ಟೋಬರ್ ಐಪಿಎಸ್ ಅಧಿಕಾರಿ ಲಾಬೂರಾಮ್ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು.