Advertisement
ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ಎಂ.ಎಚ್.ಬಂಥನಾಳಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ತಾವು ಬೆಳೆದ ಗುಣಮಟ್ಟದ ಅಲ್ಫಾನ್ಸೋ ಮಾವು ಹೊರ ದೇಶಗಳಿಗೆ ರಫ್ತು ಮಾಡಲು
ಪ್ರಯತ್ನಿಸಬೇಕು. ಇದಕ್ಕೆ ಬೇಕಾದ ರಫ್ತು ವಿಧಾನ, ಪೋಸ್ಟ್ ಹಾರ್ವೇಸ್ಟ್ಗೆ ಬೇಕಾದ ಮೂಲಸೌಕರ್ಯಗಳಾದ ಶೀತಲೀಕರಣ ಘಟಕ, ವೇರ್ಹೌಸ್, ರಿಫರ್ ವ್ಯಾನ್ ಇತ್ಯಾದಿ ಕೆಪೆಕ್ ಸಂಸ್ಥೆಯಿಂದ ಹುಬ್ಬಳ್ಳಿಯಲ್ಲಿ ಸ್ಥಾಪಿಸಿದ್ದು, ಇದನ್ನು ಮಾವು ಬೆಳೆಗಾರರು ಉಪಯೋಗಿಸಿಕೊಂಡು ರಫ್ತು ಕೈಗೊಳ್ಳ ಬಹುದು ಎಂದರು.
Related Articles
ಸಂಸ್ಕರಿಸಿ ಮಾವು(ಫಲ ) ಹಾಗೂ ಫ್ರೂಜನ್ ಮಾವುಗಳನ್ನು ರಫ್ತು ಮಾಡುತ್ತಿದ್ದು, ರೈತರು ಸಂಸ್ಕರಿಸಿದ ಮಾವುಗಳನ್ನು ರಫ್ತು ಮಾಡಲು ವಿಫುಲ ಅವಕಾಶಗಳಿವೆ ಎಂದರು.
Advertisement
ಕೆಸಿಸಿಐ ಅಧ್ಯಕ್ಷ ಎಸ್.ಪಿ.ಸಂಶಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾವು ಹಾಗೂ ಇತರೆ ದೇಶಿಯ ತಳಿಗಳ ಹಣ್ಣುಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ದೆಹಲಿಗೆ ಕಳಿಸಲು ಕೇಂದ್ರ ಸರಕಾರ ಕಿಸಾನ್ ರೈಲನ್ನು ಪರಿಚಯಿಸಿದೆ. ಎಲ್ಲ ಎಪಿಎಂಸಿ ಪ್ರಾಂಗಣಗಳಲ್ಲಿ ಶೀತಲೀಕರಣ/ ರಿಫರ್ ವ್ಯಾನ್/ವೇರ್ಹೌಸ್ ಇತ್ಯಾದಿ ಪ್ರತಿ ಪಂಚಾಯಿತಿಗೊಂದು ಸ್ಥಾಪಿಸಿದರೆ ಕೃಷಿ ಉತ್ಪನ್ನಗಳ ರಫ್ತಿಗೆ ಇನ್ನೂ ಹೆಚ್ಚು ಅನುಕೂಲವಾಗುವುದು ಎಂದರು.
ಗೌರವ ಕಾರ್ಯದರ್ಶಿ ರವೀಂದ್ರ ಎಸ್. ಬಳಿಗಾರ ಸ್ವಾಗತಿಸಿ, ಮಾತನಾಡಿ, ಕೃಷಿ ಉತ್ಪಾದಕರು, ರಫು¤ದಾರರು, ವ್ಯಾಪಾರಿಗಳುಮತ್ತು ಖರೀದಿದಾರರ ನಡುವಿನ ವ್ಯಾಪಾರ ಜಾಲವು ಕೃಷಿ-ಆಹಾರ ಸಂಸ್ಕರಣಾ ವಲಯಕ್ಕೆ ಬಹಳ ಅವಶ್ಯಕವಾಗಿದೆ. ಪ್ಯಾಕಿಂಗ್, ಗ್ರೇಡಿಂಗ್ ಮತ್ತು ಸಪ್ಲೈ ಚೈನ್ ಲಾಜಿಸ್ಟಿಕ್ಸ್ ಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು. ಬೆಂಗಳೂರಿನ ಅಪೇಡಾ ಸಂಸ್ಥೆ ಅಧಿಕಾರಿ ಬಿ.ಕಾರಂತ, ಬಾಗಲಕೋಟೆ ತೋಟಗಾರಿಕೆ ವಿವಿ ಸಹಾಯಕ ಪ್ರೊ|ಆನಂದ ನಂಜಪ್ಪನವರ, ಎಸ್ಬಿಐನ ಎಸ್ಎಂಇಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಿಮೋನ್, ರಫು¤ ಸಲಹೆಗಾರ ಸುಧೀರ ಚಿತ್ರಗಾರ, ಬೆಳಗಾವಿಯ ಗ್ರೀನ್ ಲ್ಯಾಂಡ್ ಪ್ರಸ್ಕೋ ಎಕ್ಸಪೋರ್ಟ್ದ ಲೇಖರಾಜ ಮಾಳಗಿ ತಾಂತ್ರಿಕ ಅಧಿವೇಶನ ನಡೆಸಿಕೊಟ್ಟರು. ಸಂಸ್ಥೆಯ ಮಾಜಿ ಅಧ್ಯಕ್ಷ ರಮೇಶ ಎ.ಪಾಟೀಲ, ವಿನಯ ಜವಳಿ, ಉಪಾಧ್ಯಕ್ಷ ಸಂದೀಪ ಬಿಡಸಾರಿಯಾ, ಗೌರವ ಕಾರ್ಯದರ್ಶಿ
ಮಹೇಂದ್ರ ಸಿಂಘಿ ಇದ್ದರು.