Advertisement

k’taka polls: ಜಗದೀಶ ಶೆಟ್ಟರ ನಡೆಯನ್ನೇ ಪ್ರಹ್ಲಾದ್ ಜೋಶಿ ಅನುಸರಿಸುತ್ತಾರೆ-ದೀಪಕ್ ಚಿಂಚೋರೆ

01:42 PM Apr 19, 2023 | Team Udayavani |

ಹುಬ್ಬಳ್ಳಿ: ಜಗದೀಶ ಶೆಟ್ಟರ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.  ಜೋಶಿ ಅವರು ಸಹ  ಕಾಂಗ್ರೆಸ್ ಪಕ್ಷ ಸೇರ್ಪಡೆ ಆಗಲಿದ್ದಾರೆ ಎಂದು ಹು- ಧಾ. ಪಶ್ಚಿಮ‌ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೋರೆ ಹೇಳಿದರು.

Advertisement

ನಾಮಪತ್ರ ಸಲ್ಲಿಕೆಗೂ ಮುನ್ನ ಇಲ್ಲಿನ ಸಿದ್ಧಾರೂಢಸ್ವಾಮಿ ಮಠಕ್ಕೆ ಭೇಟಿ ಕೊಟ್ಟ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಸೇರಿದ್ದಾರೆ. ಜೋಶಿ ಮತ್ತು ಶೆಟ್ಟರ ಒಟ್ಟಿಗೆ ರಾಜಕಾರಣ ಮಾಡಿಕೊಂಡು ಬಂದವರು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರೋಲ್ಲ ಎಂದರು.

ಇದನ್ನೂ ಓದಿ: Karnataka election: ಬಂಡಾಯ ಶಮನಕ್ಕೆ ಕುಂದಾನಗರಿಗೆ ಬಂದ ಬಿ.ಎಲ್. ಸಂತೋಷ್

ಜಗದೀಶ ಶೆಟ್ಟರ ನಡೆಯನ್ನೇ ಪ್ರಹ್ಲಾದ್ ಜೋಶಿ ಅನುಸರಿಸುತ್ತಾರೆ. ಅದಕ್ಕಾಗಿಯೇ ಹು-ಧಾ. ಪಶ್ಚಿಮ ಕ್ಷೇತ್ರದ ಟಿಕೆಟ್ ಘೋಷಣೆ ವಿಳಂಬವಾಯಿತು. ಈಗ ನನಗೆ ಟಿಕೆಟ್ ಕೊಡಲಾಗಿದೆ. ಮುಂದಿನ ದಿನಗಳಲ್ಲಿ ಜೋಶಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಾರೆ ಎಂದರು.

ಕ್ಷೇತ್ರದಲ್ಲಿ 11 ಜನ ಆಕಾಂಕ್ಷಿಗಳಿದ್ದರು. ಈ ಪೈಕಿ ನನಗೆ ಟಿಕೆಟ್ ಸಿಕ್ಕಿದ್ದು, ಉಳಿದವರು ನನ್ನನ್ನು ಬೆಂಬಲಿಸಲಿದ್ದಾರೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next