Advertisement

ಬಿಜೆಪಿಯವರು ನೆರೆ ಹಾನಿಗೆ ಎಷ್ಟು ಪರಿಹಾರ ನೀಡಿದ್ದಾರೆ: ಸವದಿ ಪ್ರಶ್ನೆ

11:20 PM Jul 30, 2023 | Team Udayavani |

ಹುಬ್ಬಳ್ಳಿ: ಬಿಜೆಪಿಯವರು ಮೊದಲು ರಾಜ್ಯದಲ್ಲಿ ನೆರೆ ಹಾವಳಿ, ಅತಿವೃಷ್ಟಿಯಿಂದ ಹಾಳಾಗಿದ್ದಾಗ ಏನು ಕೊಟ್ಟರು ಎಂಬುದನ್ನು ಹೇಳಲಿ. ಅವರಿಗೆ ವಿಪಕ್ಷ ನಾಯಕನನ್ನೇ ಆಯ್ಕೆ ಮಾಡಲು ಆಗುತ್ತಿಲ್ಲ. ಈಗ ಕಾಂಗ್ರೆಸ್‌ ಬಗ್ಗೆ ಏನು ಮಾತನಾಡುತ್ತಾರೆ ಎಂದು ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಿಡಿಕಾರಿದರು.

Advertisement

ಸುದ್ದಿಗಾರರ ಜತೆ ಮಾತನಾ ಡಿದ ಅವರು, ನೆರೆಯಲ್ಲಿ ಸಿಲುಕಿರು ವವರಿಗೆ ಸರಕಾರ ಎಲ್ಲ ಬಗೆಯ ಸಹಾಯ ಮಾಡುತ್ತಿದೆ. ಯಾವುದೇ ಅಧಿಕಾರವಿಲ್ಲದೆ ಅಸಹಾಯಕತೆ ಯಿಂದ ಬಸವರಾಜ ಬೊಮ್ಮಾಯಿ ವೃಥಾ ಆರೋಪ ಮಾಡುತ್ತಿದ್ದಾರೆ. ಸರಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ, ಅತಿವೃಷ್ಟಿಗೊಳಗಾ ದವರಿಗೆ ಯಾವ ಪರಿಹಾರ ನೀಡಿಲ್ಲ ಎನ್ನುವುದರಲ್ಲಿ ಅರ್ಥವಿಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next