Advertisement

ಮೋದಿ ಕಾಶಿಯಿಂದ ಸ್ಪರ್ಧಿಸಬಹುದಾದರೆ ನಾನು ಹೊರಗಿನವನೇ?: ಶತ್ರುಘ್ನ ಸಿನ್ಹಾ

12:13 PM Mar 21, 2022 | Team Udayavani |

ಕೋಲ್ಕತಾ : ಪ್ರಧಾನಿ ನರೇಂದ್ರ ಮೋದಿ ಕಾಶಿಯಿಂದ ಸ್ಪರ್ಧಿಸಬಹುದು, ಆದರೆ ಇಲ್ಲಿ ನಾನು ಹೇಗೆ ಹೊರಗಿನವನಾಗುತ್ತೇನೆ ಎಂದು ಅಸನ್ಸೋಲ್ ಲೋಕಸಭಾ ಕ್ಷೇತ್ರ ದ ಟಿಎಂಸಿ ಅಭ್ಯರ್ಥಿ, ಹಿರಿಯ ನಟ ಶತ್ರುಘ್ನ ಸಿನ್ಹಾ ಸೋಮವಾರ ಪ್ರಶ್ನಿಸಿದ್ದಾರೆ.

Advertisement

ಅಸನ್ಸೋಲ್ ಗೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಮಮತಾ ಬ್ಯಾನರ್ಜಿ ನಿಜವಾದ ಐತಿಹಾಸಿಕ ನಾಯಕಿ, ಹುಲಿ. ಅವರ ಆಹ್ವಾನದ ಮೇರೆಗೆ ನಾನು ಇಲ್ಲಿದ್ದೇನೆ. ನನಗೆ ಅಸನ್ಸೋಲ್ ಮತ್ತು ಪಶ್ಚಿಮ ಬಂಗಾಳದ ಸಾರ್ವಜನಿಕರ ಮೇಲೆ ನಂಬಿಕೆಯಿದೆ, ನಾವು ಗೆಲ್ಲುತ್ತೇವೆ, ನ್ಯಾಯ ಗೆಲ್ಲುತ್ತದೆ ಎಂದರು.

ಬಿಜೆಪಿಯನ್ನು ಕೇಳಿ, ಪ್ರಧಾನಿ ಕಾಶಿಯಿಂದ ಸ್ಪರ್ಧಿಸಬಹುದಾದರೆ ಇಲ್ಲಿ ನಾನು ಹೇಗೆ ಹೊರಗಿನವನಾಗುತ್ತೇನೆ ಎಂದು ಪ್ರಶ್ನಿಸಿದರು.

ಅಸನ್ಸೋಲ್ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಅಗ್ನಿಮಿತ್ರ ಪಾಲ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದ್ದಾರೆ.

ಬಾಬುಲ್ ಸುಪ್ರಿಯೋ ನಾಮಪತ್ರ ಸಲ್ಲಿಕೆ

Advertisement

ನಾನು ಇಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ರಾಜಕೀಯದಲ್ಲಿ ನನ್ನ ಪಾಲಿಗೆ ಇದೊಂದು ಹೊಸ ಪಯಣ. ನನಗೆ ಸಿಎಂ ಮಮತಾ ಬ್ಯಾನರ್ಜಿ ಆಶೀರ್ವಾದ ಮತ್ತು ಪಕ್ಷದ ಕಾರ್ಯಕರ್ತರ ಬೆಂಬಲ ಸಿಕ್ಕಿದೆ ಮತ್ತು ಮೊದಲಿಗಿಂತ ನನ್ನ ಎರಡನೇ ಇನ್ನಿಂಗ್ಸ್ ರಾಜಕೀಯವನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತೇನೆ ಎಂದು , ಬ್ಯಾಲಿಗಂಗೆ ವಿಧಾನಸಭಾ ಉಪಚುನಾವಣೆಯ ಟಿಎಂಸಿ ಅಭ್ಯರ್ಥಿ ಬಾಬುಲ್ ಸುಪ್ರಿಯೋ ಹೇಳಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next