Advertisement

ಪಶ್ಚಿಮ ತ್ರಿಪುರ : ಭಾರಿ ಬಿರುಗಾಳಿ, ಜಡಿ ಮಳೆ, ನೆರೆ: 382 ಮನೆ, ಅನೇಕ ಮರಗಳ ಕುಸಿತ

09:03 AM May 17, 2019 | Team Udayavani |

ಅಗರ್ತಲಾ: ಪಶ್ಚಿಮ ತ್ರಿಪುರ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಬೀಸಿದ ಭಾರೀ ಬಿರುಗಾಳಿ, ಗುಡುಗು, ಸಿಡಿಲು, ಜಡಿ ಮಳೆಗೆ ನೂರಾರು ಮನೆಗಳು ಧರಾಶಾಯಿಯಾಗಿವೆ; ಅನೇಕ ಮರಗಳು ಉರುಳಿ ಬಿದ್ದಿವೆ ಮತ್ತು ವಿದ್ಯುತ್‌ ತಂತಿಗಳು ಕಡಿದು ಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅಗರ್ತಲಾ ಮುನಿಸಿಪಲ್‌ ಕಾರ್ಪೊರೇಶನ್‌ ಗೆ ಒಳಪಟ್ಟ ಅನೇಕ ಪ್ರದೇಶಗಳು ನೀರಲ್ಲಿ ಮುಳುಗಿದ್ದು ಜಡಿಮಳೆಯಿಂದ ಉಂಟಾದ ನೆರೆಗೆ ಒಟ್ಟು 382 ಮನೆಗಳು ಕುಸಿದು ಬಿದ್ದವು ಎಂದು ರಾಜ್ಯದ ನೈಸರ್ಗಿಕ ವಿಕೋಪ ನಿರ್ವಹಣ ವಿಭಾಗದ ಪ್ರಾಜೆಕ್ಟ್ ಆಫೀಸರ್‌ ಶರತ್‌ ದಾಸ್‌ ತಿಳಿಸಿದರು.

ಮುಖ್ಯ ಕಾರ್ಯದರ್ಶಿ ಎಲ್‌ ಕೆ ಗುಪ್ತಾ ಅವರು ಈಗಾಗಲೇ ಹಿರಿಯ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ ಮತ್ತು ಮುಳುಗಡೆಯಾದ ಪ್ರದೇಶಗಳಲ್ಲಿ ಶೇಖರಗೊಂಡಿರುವ ನೀರನ್ನು ಹೊರ ಹಾಕುವ ಕೆಲಸವನ್ನು ತ್ವರಿತವಾಗಿ ಮಾಡಿಸುವಂತೆ ಸೂಚನೆ ನೀಡಿದ್ದಾರೆ ಎಂದವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next