Advertisement

Breaking News : ಬೆಳಗಾವಿಯಲ್ಲಿ ದುರಂತ : ಮನೆ ಕುಸಿದು 7 ಜನ ದುರ್ಮರಣ

09:21 PM Oct 06, 2021 | Team Udayavani |

ಬೆಳಗಾವಿ: ನವರಾತ್ರಿ ಹಬ್ಬದ ಮುನ್ನಾ ದಿನವೇ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಮನೆ‌ಗೋಡೆ ಕುಸಿದು ಒಂದೇ‌ ಕುಟುಂಬದ ಆರು ಜನ ಸೇರಿ ಏಳು ಜನ ಮೃತಪಟ್ಟ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.

Advertisement

ಅರ್ಜುನ ಹನುಮಂತ ಖನಗಾಂವಿ(೫೮), ಗಂಗವ್ವ ಭೀಮಪ್ಪ ಖನಗಾಂವಿ(೫೦), ಸತ್ಯವ್ವ ಅರ್ಜುನ ಖನಗಾಂವಿ(೪೫), ಸವಿತಾ ಭೀಮಪ್ಪ‌ ಖನಗಾಂವಿ(೨೮), ಲಕ್ಷ್ಮೀ ಅರ್ಜುನ ಖನಗಾಂವಿ(೧೫) ಹಾಗೂ ಪೂಜಾ ಅರ್ಜುನ ಖನಗಾಂವಿ(೦೮), ಕಾಶವ್ವ. ವಿಠ್ಠಲ ಕೊಳೆಪ್ಪನವರ(೦೮) ಮೃತಪಟ್ಟಿದ್ದಾರೆ.

ನಗರ ಸೇರಿದಂತೆ ಜಿಲ್ಲೆ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಕಳೆದ ಎರಡು ದಿನಗಳಿಂದ  ಧಾರಾಕಾರ ಮಳೆ ಸುರಿಯುತ್ತಿದೆ.  ಬಡಾಲ ಅಂಕಲಗಿ ಗ್ರಾಮದ ಹಳೆಯ ಮನೆಯ ಛಾವಣಿ ಬಿಚ್ಚಿ ಹೊಸ ಛಾವಣಿ ಹಾಕುವ ಸಿದ್ಧತೆ ಮಾಡಲಾಗುತ್ತಿತ್ತು. ಪಕ್ಕದಲ್ಲಿಯೇ ಈ ಕುಟುಂಬ ತಗಡಿನ ಶೆಡ್ ಹಾಕಿ ವಾಸಿಸುತ್ತಿತ್ತು. ಆದರೆ ಭಾರೀ ಮಳೆ ಸುರಿಯುತ್ತಿರುವುದನ್ನು ಈ ಕುಟುಂಬದ ಸದಸ್ಯರು ನೋಡುತ್ತ ನಿಂತಿದ್ದರು. ಈ ವೇಳೆ ಹಳೆಯ ಗೋಡೆ ದಿಢೀರ್ ಕುಸಿದು ಬಿದ್ದಿದೆ. ಮೈಮೇಲೆ ಗೋಡೆ ಕುಸಿದು ಬಿದ್ದು ಎಲ್ಲರೂ ಮೃತಪಟ್ಟಿದ್ದಾರೆ.

ಖನಗಾಂವಿ ಕುಟುಂಬದ ಬಾಲಕಿ‌ ಸೇರಿ ಆರು ಜನರು ಹಾಗೂ ಪಕ್ಕದ ಮನೆಯ ಎಂಟು ವರ್ಷದ ಬಾಲಕಿ‌ ಸೇರಿ‌ ಏಳು ಜನ‌ ಮೃತಪಟ್ಟಿದ್ದಾರೆ. ಐದು ಜನ ಸ್ಥಳದಲ್ಲಿ ಮೃತಪಟ್ಟರೆ, ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವಾಗ ಸಾವಿಗೀಡಾಗಿದ್ದಾರೆ.

ಮನೆಯ ಯಜಮಾನ ಭೀಮಪ್ಪ‌ ಹಾಗೂ ಇವರ ಮಗ ದೇವರಾಜ ಬದುಕುಳಿದಿದ್ದಾರೆ. ಸ್ಥಳಕ್ಕೆ ಹಿರೇಬಾಗೇವಾಡಿ ಠಾಣೆ ಪೊಲೀಸರು ಬಂದು ಮೃತದೇಹಗಳನ್ನು ಹೊರ‌ ತೆಗೆಯುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next