Advertisement

ಮಲಪನಗುಡಿ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಔಷಧಿ ವಿತರಣೆ

04:03 PM Jun 14, 2020 | Naveen |

ಹೊಸಪೇಟೆ: ತಾಲ್ಲೂಕಿನ ಮಪಲನಗುಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಶಾ ಕಾರ್ಯಕರ್ತೆಯರಿಗೆ ಶನಿವಾರ ಆಯುಷ್‌ ಔಷಧಿ ವಿತರಿಸಲಾಯಿತು.

Advertisement

ಕೋವಿಡ್‌-19 ನಿಯಂತ್ರಣದ ಹಿನ್ನೆಲೆಯಲ್ಲಿ ಕಾರ್ಯನಿರತ ಸುಮಾರು 89 ಆಶಾ ಕಾರ್ಯಕರ್ತೆಯರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವಂತಹ ಅರ್ಶೇನಿಕ್‌ ಅಲ್ಬಮ್‌-30, ಸಂಶಮನವಟಿ ಮತ್ತು ಚವನಪ್ರಾಶ ಆಯುಷ್‌ ಔಷಧಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಆಯುಷ್ಯ ಮಾತ್ರೆ ಸೇವನೆ ವಿಧಾನದ ಅರಿವು ಮೂಡಿಸಲಾಯಿತು. ನಗರದ ಸರ್ಕಾರಿ ಆಯುರ್ವೇದ ಆಸ್ಪತ್ರೆ ವೈದ್ಯಾಧಿಕಾರಿ ಡಾ| ಮುನಿ ವಾಸುದೇವರೆಡ್ಡಿ, ಡಾ| ರೂಪ್‌ ಸಿಂಗ್‌ ರಾಥೋಡ, ಡಾ| ಆರತಿ ಹಿರೇಮಠ ಹಾಗೂ ಡಾ| ಸರಸ್ವತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next