Advertisement

Hosapete ಮಗಳ ಕೊಂದು ತಾಯಿ ನೇಣಿಗೆ ಶರಣು

07:27 PM Oct 14, 2023 | Team Udayavani |

ಹೊಸಪೇಟೆ: ಮಕ್ಕಳು ಮಾತು ಕೇಳುತ್ತಿಲ್ಲ ಅಂತ ಮಗಳನ್ನು ಕೊಲೆ ಮಾಡಿ ತಾಯಿಯೂ ನೇಣು ಬಿಗಿದುಕೊಂಡು ಸಾವನಪ್ಪಿದ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ ನಡೆದಿದೆ.

Advertisement

ಗ್ರಾಮದ ನಿವಾಸಿ ಲೇಟ್ ಶಫಿಸಾಬ್ ಎಂಬುವರರ ಪತ್ನಿ ಬೇಗಂ (5೦) ಮಾತು ಕೇಳಲ್ಲಿಲ್ಲ ಎಂಬ ಕಾರಣಕ್ಕೆ ತನ್ನ ಇಬ್ಬರೂ ಮಕ್ಕಳ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದಾಳೆ. ಮಗಳು ಶಮಾಬಾನು (18) ಸ್ಥಳದಲ್ಲಿ ಮೃತಪಟ್ಟರೆ, ಮಗ ಅಮಾನುಲ್ಲಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾನೆ. ತನ್ನ ಇಬ್ಬರೂ ಮಕ್ಕಳು ಮೃತಪಟ್ಟಿದ್ದಾರೆ ಎಂದು ಭಾವಿಸಿ ತಾನು ಕೂಡ ನೇಣಿಗೆ ಕೊರಳೊಡ್ಡಿ ಸಾವನಪ್ಪಿದ್ದಾಳೆ.

ಘಟನೆಯಲ್ಲಿ ಗಾಯಗೊಂಡ ಅಮಾನುಲ್ಲಾನನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ.

ಮೃತ ಬೇಗಂ ಅವರ ಗಂಡನ ತಮ್ಮ ಅಬ್ದುಲ್ ಸಾಬ್, ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ತನಿಖೆ ಮುಂದುವರೆದಿದೆ.

ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಆಗಮಿಸಿ ಹೆಚ್ಚಿನ ಸಾಕ್ಷ್ಯವನ್ನು ಸಂಗ್ರಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು ತಿಳಿಸಿದ್ದಾರೆ.

Advertisement

ಗ್ರಾಮಕ್ಕೆ ಎಸ್ಪಿ ಭೇಟಿ:
ಘಟನಾ ಸ್ಥಳಕ್ಕೆ ಎಸ್ಪಿ ಹರಿಬಾಬು ಹಾಗೂ ಡಿವೈಎಸ್ಪಿ ವೆಂಕಟಪ್ಪ ನಾಯಕ, ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತನಿಖಾಧಿಕಾರಿಗಳಾದ ನಾಗರಾಜ ಎಂ ಕಮ್ಮಾರ, ಪಿ.ಎಸ್.ಐ ಶಂಭುಲಿಅಗ ಹಿರೇಮಠ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next