Advertisement

ಹಸಿದ ಕೋತಿಗಳಿಗೆ ಆಹಾರ ವಿತರಿಸಿದ ಶಾಸಕ ಗೂಳಿಹಟ್ಟಿ

04:30 PM Apr 20, 2020 | Naveen |

ಹೊಸದುರ್ಗ: ಕೋವಿಡ್‌ 19ನಿಂದಾಗಿ ಪ್ರಾಣಿ-ಪಕ್ಷಿಗಳ ಆಹಾರಕ್ಕೂ ತತ್ವಾರ ತಂದಿಟ್ಟಿದೆ. ಈ ಹಿನ್ನೆಲೆಯಲ್ಲಿ ದಾರಿಯಲ್ಲಿ ಕಂಡ ಮಂಗಗಳಿಗೆ ಹಣ್ಣು ವಿತರಿಸಿ ಶಾಸಕ ಗೂಳಿಹಟ್ಟಿ ಶೇಖರ್‌ ಮಾನವೀಯತೆ ಮೆರದಿದ್ದಾರೆ.

Advertisement

ಶಾಸಕರು ಈಗಾಗಲೇ ಜಾನುವಾರುಗಳಿಗೆ ಮೇವು ವಿತರಿಸಲು ಕ್ರಮ ಕೈಗೊಂಡಿದ್ದಾರೆ. ಈಗ ಧಾರ್ಮಿಕ ಕ್ಷೇತ್ರಗಳಲ್ಲಿರುವ ಪ್ರಾಣಿ- ಪಕ್ಷಿಗಳ ಹಸಿವು ನೀಗಿಸಲು ಮುಂದಾಗಿದ್ದಾರೆ. ಮತ್ತೋಡು ಹೋಬಳಿಯ ದಶರಥರಾಮೇಶ್ವರ ಪುಣ್ಯ ಕ್ಷೇತ್ರದಲ್ಲಿರುವ ವಾನರ ಪಡೆಗೆಆಹಾರದ ಕೊರೆತಯುಂಟಾಗಿತ್ತು. ಲಾಕ್‌ಡೌನ್‌ ಅವಧಿ ಮುಗಿಯುವರೆಗೆ ಕೋತಿಗಳಿಗೆ ಆಹಾರದ ವ್ಯವಸ್ಥೆ ಮಾಡುವಂತೆ ದೇವಾಲಯದ ಆಡಳಿತ ಮಂಡಳಿಯವರಿಗೆ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next