Advertisement

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

07:37 AM Jul 27, 2024 | Team Udayavani |

ಮೇಷ: ಕೆಲವರಿಗೆ ಅರ್ಧ ದಿನ ಕೆಲಸ, ಕೆಲವರಿಗೆ ಇಡೀದಿನ ವಿರಾಮ. ಉದ್ಯೋಗ ಸ್ಥಾನದಲ್ಲಿ ನಿಶ್ಚಿಂತೆ. ಉದ್ಯಮ, ವ್ಯವಹಾರದಲ್ಲಿ ಉತ್ತಮ ಲಾಭ. ಲೇವಾದೇವಿ ವ್ಯವಹಾರಕ್ಕೆ ಅನನುಕೂಲ. ಮನೆಯವರ ಆರೋಗ್ಯ ಉತ್ತಮ.

Advertisement

ವೃಷಭ: ಪೂರ್ವಾಹ್ನ ಹತ್ತೂವರೆಯ ಬಳಿಕ ಶುಭ. ನಿರೀಕ್ಷಿತ ಕಾರ್ಯಗಳು ನಡೆಯುತ್ತವೆ. ಸರಕಾರಿ ಅಧಿಕಾರಿಗಳಿಗೆ ಕೊಂಚ ನೆಮ್ಮದಿ. ಉದ್ಯಮದ ಉತ್ಪನ್ನಗಳಿಗೆ ಒಳ್ಳೆಯ ಹೆಸರು. ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ.

ಮಿಥುನ: ಸಪ್ತಾಹದ ಕಾರ್ಯ ಮುಗಿಸುವ ಆತುರ. ಸಹೋದ್ಯೋಗಿಗಳಿಗೆ ಸಹಾಯ ಮಾಡಿ ಹರ್ಷ. ಉದ್ಯಮದ ಹೊಸ ಉತ್ಪನ್ನಗಳಿಗೆ ಪ್ರಚಾರ ನೀಡುವ ಯತ್ನ. ಪಿತ್ರಾರ್ಜಿತ ಆಸ್ತಿಯಲ್ಲಿ ಗೃಹನಿರ್ಮಾಣಕ್ಕೆ ಸಿದ್ಧತೆ.

ಕರ್ಕಾಟಕ: ಉದ್ಯಮಕ್ಕೆ ಕಾನೂನು ಸಮಸ್ಯೆಗಳಿಂದ ಮುಕ್ತಿ. ನೌಕರರ ಯೋಗ ಕ್ಷೇಮಕ್ಕೆ ವಿಶೇಷ ಯೋಜನೆ. ಖಾದಿ, ಗ್ರಾಮೋ ದ್ಯೋಗ ಬೆಳೆಸಲು ಆಸಕ್ತಿ. ಹಿರಿಯರ ಆರೋಗ್ಯದ ಮೇಲೆ ವಾತಾವರಣದ ಪ್ರಭಾವ.

ಸಿಂಹ: ಉನ್ನತ ವರ್ಗದವರೊಂದಿಗೆ ಸಮಾ ಲೋಚನೆ ಉತ್ಪನ್ನಗಳ ಜಾಹೀರಾತು ವೆಚ್ಚ ಏರಿಕೆ. ಪಶ್ಚಿಮದ ಕಡೆಯಿಂದ ಶುಭ ಸಮಾಚಾರ. ಮಹಿಳೆಯರ ಗೃಹೋದ್ಯಮ ಯಶಸ್ಸಿನತ್ತ ಮುನ್ನಡೆ. ಸಾಮಾಜಿಕ ಪಿಡುಗುಗಳ ನಿವಾರಣೆಗೆ ಸಹಕಾರ.

Advertisement

ಕನ್ಯಾ: ಸರಕಾರಿ ಉದ್ಯೋಗಿಗಳಿಗೆ ಕೊಂಚ ಆತಂಕ. ಎಲೆಕ್ಟ್ರಾನಿಕ್ಸ್‌ ಉದ್ಯಮಗಳಿಗೆ ಅಧಿಕ ಬೇಡಿಕೆ. ವೃತ್ತಿ ಪರಿಣತಿ ವೃದ್ಧಿಗೆ ಪ್ರಯತ್ನ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂತೃಪ್ತಿ. ಕುಟುಂಬ ವ್ಯವಹಾರಾರ್ಥ ಸಣ್ಣ ಪ್ರವಾಸ.

ತುಲಾ: ದೈಹಿಕ ಆರೋಗ್ಯ ಸಮಸ್ಯೆಗೆ ಪರಿ ಹಾರ. ಆಪ್ತರಂತೆ ನಟಿಸುವ ಧೂರ್ತರನ್ನು ದೂರವಿಡಿ. ವೃತ್ತಿ ಪರಿಣತಿ ವೃದ್ಧಿಗೆ ಹಿರಿಯರ ಮಾರ್ಗದರ್ಶನ. ಉದ್ಯೋಗ ಸ್ಥಾನಕ್ಕೆ ಗಣ್ಯ ವ್ಯಕ್ತಿಗಳ ಭೇಟಿ. ಹತ್ತಿರದ ದೇವಾಲಯಕ್ಕೆ ಸಂದರ್ಶನ.

ವೃಶ್ಚಿಕ: ಹೊಂದಾಣಿಕೆ ಮನೋಭಾವದಿಂದ ಯಶಸ್ಸು. ಉದ್ಯಮದ ಹೊಸ ವ್ಯವಸ್ಥೆಯಲ್ಲಿ ನಿಧಾನ ಪ್ರಗತಿ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ. ಹಳೆಯ ನಿಕಟ ಪರಿಚಿತರ ಅಕಸ್ಮಾತ್‌ ಭೇಟಿ. ಜೀವನ ಸಂಗಾತಿಯ ಆಯ್ಕೆಯಲ್ಲಿ ಎಚ್ಚರ.

ಧನು: ಉದ್ಯೋಗದಲ್ಲಿ ಹಿತೈಷಿಗಳಿಂದ ಸಹಾಯ. ಸಣ್ಣ ಪ್ರಮಾಣದ ಗೃಹೋದ್ಯಮ ಆರಂಭ. ಹೊಸ ನಿವೇಶನ ಖರೀದಿಗೆ ವಿಘ್ನ. ಊರಿನ ದೇವಾಲಯಕ್ಕೆ ಸಂದರ್ಶನ. ಬಂಧುಗಳ ಮನೆಯ ದೇವತಾಕಾರ್ಯದಲ್ಲಿ ಭಾಗಿ.

ಮಕರ: ಉತ್ಸಾಹದೊಂದಿಗೆ ದಿನಾರಂಭ. ಉದ್ಯೋಗ ಸ್ಥಾನದಲ್ಲಿ ಉಲ್ಲಾಸ. ಲೆಕ್ಕ ಪರಿಶೋಧಕರಿಗೆ ಕೆಲಸ ಮುಗಿಸುವ ಒತ್ತಡ. ಸಹೋ ದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ, ಸಿದ್ಧ ಉಡುಪು ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ.

ಕುಂಭ: ಸತ್ಕರ್ಮಗಳಿಂದ ಪುಣ್ಯಸಂಪತ್ತು ವೃದ್ಧಿ. ಗೃಹೋದ್ಯಮ ಉತ್ಪನ್ನಗಳ ವಿತರಣೆ ಜಾಲ ವೃದ್ಧಿ. ಮುದ್ರಣ ಸಾಮಗ್ರಿಗಳು, ಸ್ಟೇಶನರಿ, ಶೋಕಿ ವಸ್ತುಗಳ ವಿತರಕರಿಗೆ ಅಪಾರ ಲಾಭ. ಬಂಧುಗಳ ಮನೆಯಲ್ಲಿ ದೇವತಾರ್ಚನೆ. ಹಿರಿಯರ ಆರೋಗ್ಯದ ಕಡೆಗೆ ಗಮನವಿರಲಿ.

ಮೀನ: ವಾರಾಂತ್ಯದಲ್ಲಿ ಕೆಲಸ ಮುಗಿಸುವ ಒತ್ತಡ. ಸರಕಾರಿ ಇಲಾಖೆಗಳವರಿಂದ ಸಕಾರಾತ್ಮಕ ಸ್ಪಂದನ. ಅಧ್ಯಾಪಕರ ಸೇವೆಗೆ ಪ್ರಶಂಸೆ. ಮನೆ ಮಂದಿಯೆಲ್ಲರ ಆರೋಗ್ಯ ಉತ್ತಮ. ಸಂಸಾರಸಹಿತ ದೇವಮಂದಿರಕ್ಕೆ ಸಂದರ್ಶನ ವ್ಯಯ.

Advertisement

Udayavani is now on Telegram. Click here to join our channel and stay updated with the latest news.

Next