Advertisement

Daily Horoscope: ಉದ್ಯೋಗ ಬದಲಾವಣೆ ಮುಂದೂಡಿಕೆ, ಆಪ್ತರಿಂದ ನಿರೀಕ್ಷಿತ ಸಹಾಯ

07:32 AM Aug 17, 2024 | Team Udayavani |

ಮೇಷ: ಉದ್ಯೋಗ ಸ್ಥಾನದಲ್ಲಿ ಮಾಮೂಲು ಅನುಭವ. ವ್ಯಾಪ್ತಿ ವಿಸ್ತರಣೆಗೆ ಸಮಯ ಅಪಕ್ವ. ದವಸ ಧಾನ್ಯ ವ್ಯಾಪಾರಿಗಳಿಗೆ ಹೇರಳ ಲಾಭ. ವಸ್ತ್ರ, ಆಭರಣ ಖರೀದಿಯ ಸಾಧ್ಯತೆ. ಲೇವಾದೇವಿ ವ್ಯವಹಾರದಲ್ಲಿ ನಿರೀಕ್ಷಿತ ಲಾಭ ಇಲ್ಲ.

Advertisement

ವೃಷಭ: ವ್ಯವಹಾರ ಕ್ಷೇತ್ರದಲ್ಲಿ ಹೊಸ ಮೂಲಗಳಿಂದ ಸಹಾಯ. ಉದ್ಯೋಗ ಸ್ಥಾನದಲ್ಲಿ ಸಮಾಧಾನದ ವಾತಾವರಣ. ಕೆಲವರಿಗೆ ಅನಿರೀಕ್ಷಿತ ಧನಾಗಮ ಸಂಭವ. ಪ್ರಾಪ್ತವಯಸ್ಕ ಪುತ್ರನ ವಿವಾಹಕ್ಕೆ ಸಿದ್ಧತೆ. ಹಿರಿಯರಿಗೆ, ಗೃಹಿಣಿಯರಿಗೆ, ಮಕ್ಕಳಿಗೆ ಸಂತೋಷ.

ಮಿಥುನ: ಸಕಾಲದಲ್ಲಿ ಒದಗಿ ಬಂದ ಧನಸಹಾಯ. ಉದ್ಯೋಗದಲ್ಲಿ ಮೇಲಧಿಕಾರಿ ಗಳಿಗೆ ತೃಪ್ತಿ. ವಸ್ತ್ರ, ಉಡುಪು, ವಾಹನ ಉದ್ಯಮಿಗಳಿಗೆ ಶುಭದಿನ. ಗೃಹೋತ್ಪನ್ನ ತಿನಿಸುಗಳಿಗೆ ಗ್ರಾಹಕರ ಹೆಚ್ಚಳ. ಹಿರಿಯರಿಗೆ, ಗೃಹಿಣಿಯರಿಗೆ ನೆಮ್ಮದಿ.

ಕರ್ಕಾಟಕ: ಉದ್ಯೋಗ ಬದಲಾವಣೆ ಮುಂದೂಡಿಕೆ. ಹಿರಿಯರ ಅನಾರೋಗ್ಯ ಪೀಡೆಯಿಂದ ಮುಕ್ತಿ. ಆಪ್ತರಿಂದ ನಿರೀಕ್ಷಿತ ಸಹಾಯ ಲಭ್ಯ. ವಿದ್ಯಾರ್ಥಿಗಳ ಅಧ್ಯಯನದಲ್ಲಿ ಹೆಚ್ಚು ಪರಿಶ್ರಮಕ್ಕೆ ಒತ್ತು. ದಿನವಿಡೀ ಮಿಶ್ರ ಫ‌ಲಗಳ ಅನುಭವ.

ಸಿಂಹ: ಸಂದಭೋìಚಿತ ನಡೆಗಳಿಂದ ಕಾರ್ಯ ಯಶಸ್ವಿ. ಉದ್ಯೋಗದಲ್ಲಿ ಉತ್ತಮ ಪ್ರಗತಿ.ಗುರು ದೇವತಾನುಗ್ರಹಕ್ಕಾಗಿ ತೀವ್ರ ಪ್ರಾರ್ಥನೆ ಅವಶ್ಯ. ಕಟ್ಟಡ ನಿರ್ಮಾಪಕರಿಗೆ ಕೆಲಸ ಮುಗಿಸುವ ಒತ್ತಡ. ವಿದ್ಯಾರ್ಥಿಗಳ ಲೋಕಜ್ಞಾನ ವೃದ್ಧಿಗೆ ಅನುಕೂಲ ವಾತಾವರಣ.

Advertisement

ಕನ್ಯಾ: ಉದ್ಯೋಗದಲ್ಲಿ ಕೆಲವರಿಗೆ ವೇತನ ಏರಿಕೆ. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಗೃಹಿಣಿಯರ ಸೊÌàದ್ಯೋಗ ಯೋಜನೆ ಪ್ರಗತಿ .

ತುಲಾ: ವಿವೇಕದ ಯೋಜನೆಯಿಂದ ಮಕ್ಕಳ ಭವಿಷ್ಯ ಭದ್ರ. ಉದ್ಯೋಗ ಸ್ಥಾನದಲ್ಲಿ ಸುಲಲಿತವಾಗಿ ಕಾರ್ಯ ನಿರ್ವಹಣೆ. ಉತ್ಪನ್ನಗಳ ಗುಣಮಟ್ಟ ಸುಧಾರಣೆಯತ್ತ ಗಮನ. ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳ ಪ್ರಗತಿ . ಮನೆಯಲ್ಲಿ ಎಲ್ಲರಿಗೂ ಆರೋಗ್ಯ ಭಾಗ್ಯ.

ವೃಶ್ಚಿಕ: ಹಿತಶತ್ರುಗಳ ಸಂಚು ವಿಫ‌ಲ. ತಾಳ್ಮೆಯ ವರ್ತನೆಯಿಂದ ಹಿರಿಯರ ಒಲವು ಲಭ್ಯ. ವ್ಯವಹಾರದ ಸಂಬಂಧ ಉತ್ತರ ದಿಕ್ಕಿನಲ್ಲಿ ಪಯಣ ಸಂಭವ. ಹಿರಿಯರ ಆರೋಗ್ಯ ಸುಧಾರಣೆ. ನೆರೆಯವರೊಡನೆ ಬಾಂಧವ್ಯ ವೃದ್ಧಿ.

ಧನು: ಅನಿರೀಕ್ಷಿತ ಸಹಾಯ ಪ್ರಾಪ್ತಿ. ದಂಪತಿಗಳ ನಡುವೆ ಅನುರಾಗ ವೃದ್ಧಿ . ಶಿಕ್ಷಿತರಿಗೆ ಯೋಗ್ಯ ಉದ್ಯೋಗ ಲಭಿಸುವ ಸಾಧ್ಯತೆ. ಸಣ್ಣ ಗೃಹೋದ್ಯಮ ಅಥವಾ ಹೈನುಗಾರಿಕೆ ಆರಂಭಿಸಲು ಒಲವು. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂತಸ.

ಮಕರ: ಹೊಸ ಅವಕಾಶಗಳಿಗಾಗಿ ಮುಂದುವರಿದ ಹುಡುಕಾಟ. ಸಹೋದ್ಯೋಗಿ ಗಳಿಂದ ಸಹಕಾರ. ಕುಟುಂಬದ ಸದಸ್ಯರೊಂದಿಗೆ ಪ್ರೀತಿ, ವಾತ್ಸಲ್ಯದ ಸಂಬಂಧ ವೃದ್ಧಿ.ತಂದೆಯ ಕಡೆಯ ಬಂಧುಗಳ ಆಗಮನ. ಮಹಿಳೆಯರ ಗೃಹೋದ್ಯಮ ಯೋಜನೆಗೆ ಉÇÉೇಖಾರ್ಹ ಯಶಸ್ಸು.

ಕುಂಭ: ಅನನುಭವಿ ಸಹೋದ್ಯೋಗಿಗಳಿಗೆ ಮಾರ್ಗದರ್ಶನದ ಹೊಣೆ. ಸೇವಾಪರತೆಯಿಂದ ಗೌರವ, ಜನಪ್ರಿಯತೆ ವೃದ್ಧಿ. ವೃತ್ತಿಪರರಿಗೆ ಸರ್ವತ್ರ ಶ್ಲಾಘನೆ. ವೈದ್ಯರ ಭೇಟಿಯಿಂದ ಸಣ್ಣ ತೊಂದರೆ ಪರಿಹಾರ. ಅಪರೂಪದ ಅತಿಥಿಗಳು ಆಗಮಿಸಿ ಮನೆಮಂದಿಗೆ ಹರ್ಷ.

ಮೀನ: ವ್ಯವಹಾರದಲ್ಲಿ ಅಪರಿಮಿತ ಮುನ್ನಡೆಯ ದಿನ.ಹಣಕಾಸು ವ್ಯವಹಾರ ಸುಧಾರಣೆ. ಸರಕಾರಿ ಇಲಾಖೆಗಳಲ್ಲಿ ಅಪೇಕ್ಷಿತ ಕಾರ್ಯಗಳ ಮುನ್ನಡೆ.ನೂತನ ವಾಹನ, ನಿವೇಶನ ಖರೀದಿ.. ಮಕ್ಕಳಿಂದ ಹಿರಿಯರಿಗೆ ಆನಂದ.

Advertisement

Udayavani is now on Telegram. Click here to join our channel and stay updated with the latest news.

Next