Advertisement

ಶಾಲಾ ವಠಾರದಲ್ಲಿ ಕರ್ಕಶ ಹಾರ್ನ್ ; ತಡೆಗೆ ಆಗ್ರಹ

01:10 AM Mar 09, 2019 | Team Udayavani |

ಗಂಗೊಳ್ಳಿ: ಶಾಲಾ ವಠಾರ ಮತ್ತು ಆಟದ ಮೈದಾನದಲ್ಲಿ ತ್ಯಾಜ್ಯ ವಿಲೇವಾರಿ, ವಠಾರದಲ್ಲಿ ನೀರು ನಿಲ್ಲದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು, ಅದಲ್ಲದೆ ಶಾಲಾ ವಠಾರದಲ್ಲಿ ವಾಹನಗಳ ಕರ್ಕಶ ಹಾರ್ನ್ನಿಂದ ತೊಂದರೆಯಾಗುತ್ತಿದ್ದು, ಅದಕ್ಕೆ ಬ್ರೇಕ್‌ ಹಾಕಬೇಕು ಎನ್ನುವ ಆಗ್ರಹ ಮಕ್ಕಳಿಂದ ಗಂಗೊಳ್ಳಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಕೇಳಿಬಂತು. 

Advertisement

ಇಲ್ಲಿನ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಗಂಗೊಳ್ಳಿ ಗ್ರಾ.ಪಂ.ನ ಮಹಿಳಾ ಮತ್ತು ಮಕ್ಕಳ ಗ್ರಾಮ ಸಭೆ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.ಉಪಾಧ್ಯಕ್ಷೆ ಪ್ರೇಮಾ ಸಿ.ಎಸ್‌. ಪೂಜಾರಿ, ಜಿಲ್ಲಾ ಪಂಚಾಯ ತ್‌ ಸದಸ್ಯೆ ಶೋಭಾ ಜಿ. ಪುತ್ರನ್‌, ಲಕ್ಷ್ಮೀಕಾಂತ ಮಡಿವಾಳ, ಫಿಲೋಮಿನಾ ಫೆರ್ನಾಂಡಿಸ್‌, ಶೈಲಾ ಕೋಟ್ಯಾನ್‌, ಗಂಗೊಳ್ಳಿ  ಠಾಣೆಯ ಉಪನಿರೀಕ್ಷಕ ವಾಸಪ್ಪ ನಾಯ್ಕ, ಅಂಗನವಾಡಿ ಮೇಲ್ವಿಚಾರಕಿ ಪ್ರಭಾವತಿ ಶೆಡ್ತಿ, ಕಿರಿಯ ಆರೋಗ್ಯ ಸಹಾಯಕಿ ಪ್ರಜ್ವಲಾ, ಗಂಗೊಳ್ಳಿ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.

ಪಿಡಿಒ ಚಂದ್ರಶೇಖರ ಸ್ವಾಗತಿಸಿ, ನಮ್ಮ ಭೂಮಿಯ ಪ್ರಭಾಕರ ಪ್ರಾಸ್ತಾವಿಸಿದರು. ಸಿಬಂದಿ ನಾರಾಯಣ ಶ್ಯಾನುಭಾಗ್‌ ವಂದಿಸಿದರು.

ಸಭೆಯಲ್ಲಿ ಪ್ರಸ್ತಾಪವಾದ ವಿಚಾರ
ಗಂಗೊಳ್ಳಿ ಭಾಗದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ತಮ್ಮ ಶಾಲೆಯ ಸುತ್ತಮುತ್ತಲಿನ ಸಮಸ್ಯೆಯನ್ನು ಸಭೆಯಲ್ಲಿ ಮುಖ್ಯರಸ್ತೆ ಕಾಂಕ್ರೀಟಿಕರಣ ಕಾಮಗಾರಿ ಕುರಿತು, ಮೀನು ಮಾರುಕಟ್ಟೆಯ ಕೊಳಚೆ ನೀರಿನಿಂದ ಸಮಸ್ಯೆಯಾಗುತ್ತಿದೆ. ಮೀನು ಮಾರುಕಟ್ಟೆ ಸಮೀಪ ಚರಂಡಿಯಲ್ಲಿ ತುಂಬಿಕೊಂಡಿರುವ ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯಗಳನ್ನು ವಿಲೇವಾರಿ ಮಾಡಬೇಕು, ಗಂಗೊಳ್ಳಿಯಲ್ಲಿ ಒಳಚರಂಡಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಬೇಕು ಎನ್ನುವ ವಿಚಾರಗಳನ್ನು ಪ್ರಸ್ತಾಪಿಸಿ, ಪರಿಹಾರಕ್ಕೆ ಆಗ್ರಹಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next