Advertisement

ಮದ್ಯ ಮಾರಾಟ ಅನುಮತಿ ವಾಪಸ್‌ ಪಡೀರಿ

11:19 AM May 07, 2020 | Naveen |

ಹೊನ್ನಾಳಿ: ಕೋವಿಡ್ ಹಿನ್ನೆಲೆಯಲ್ಲಿ ಕಳೆದ 40 ದಿನಗಳಿಂದ ಮದ್ಯ ಮಾರಾಟ ಬಂದ್‌ ಮಾಡಿದ್ದರಿಂದ ರಾಜ್ಯದಲ್ಲಿ ಶಾಂತಿ ನೆಲೆಸಿದೆ. ಹಾಗಾಗಿ ಮದ್ಯ ಮಾರಾಟಕ್ಕೆ ನೀಡಿರುವ ಅವಕಾಶವನ್ನು ಹಿಂಪಡೆಯಬೇಕು ಎಂದು ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಹೊಸಕೆರೆ ಸುರೇಶ್‌ ಒತ್ತಾಯಿಸಿದರು.

Advertisement

ನ್ಯಾಮತಿ ಪಟ್ಟಣದ ಮಹಂತೇಶ್ವರ ವೀರಶೈವ ಕಲ್ಯಾಣಮಂದಿರದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದನ್ನು ಖಂಡಿಸಿ ಅವರು ಮಾತನಾಡಿದರು. ಕರ್ನಾಟಕ ಪತ್ರಕರ್ತರ ಸಂಘದ ಪದಾ ಧಿಕಾರಿಗಳಾದ ಡಿ.ಎಂ. ಹಾಲಾರಾಧ್ಯ, ಎಂ.ಎಸ್‌. ಶಾಸ್ತ್ರಿ ಹೊಳೆಮಠ್, ಜಿಲ್ಲಾ ಜನ ಜಾಗೃಥಿ ವೇದಿಕೆ ಸದಸ್ಯರಾದ ಹವಳ ಲಿಂಗರಾಜ್‌, ಎಂ.ಯು. ನಟರಾಜ್‌, ಶ್ರೀನಿವಾಸ್‌ ನಾಡಿಗ್‌, ಕತ್ತಿಗೆ ನಾಗರಾಜ್‌, ಧರ್ಮಸ್ಥಳ ಸಂಸ್ಥೆಯ ತಾಲೂಕು ಯೋಜನಾಧಿ ಕಾರಿ ಬಸವರಾಜ ಅಂಗಡಿ, ಸರಳಿಮನೆ ಮಂಜುನಾಥ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next