Advertisement

ಹಾಂಕಾಂಗ್‌ ಹಿಂಸೆ ತಾರಕಕ್ಕೆ

09:40 AM Nov 13, 2019 | Team Udayavani |

ಹಾಂಕಾಂಗ್‌: ಪ್ರಜಾಪ್ರಭುತ್ವಕ್ಕೆ ಆಗ್ರಹಿಸಿ ಕಳೆದ ಐದು ತಿಂಗಳಿಂದ ನಡೆಯುತ್ತಿರುವ ಹೋರಾಟದಿಂದ ಬೆಂಕಿಯ ಕೂಪವಾಗಿರುವ ಹಾಂಕಾಂಗ್‌ನಲ್ಲಿ ಸೋಮವಾರ ನಾಟಕೀಯ ಬೆಳವಣಿಗೆಯೊಂದು ಘಟಿಸಿದ್ದು, ಅದರಲ್ಲಿ ಪೊಲೀಸ್‌ ಸಿಬಂದಿಯೊಬ್ಬ ಹೋರಾಟಗಾರನೊಬ್ಬನಿಗೆ ತನ್ನ ಪಿಸ್ತೂಲಿನಿಂದ ಗುಂಡು ಹಾರಿಸಿ ಗಾಯಗೊಳಿಸಿದ್ದಾನೆ.

Advertisement

ಅದರ ವೀಡಿಯೋ ತುಣುಕೊಂದು ಈಗ ಅಲ್ಲಿ ಎಲ್ಲೆಡೆ ಹರಿದಾಡುತ್ತಿದ್ದು, ಅದರ ಪರಿಣಾಮ, ಅದಾಗಲೇ ಹಿಂಸಾಚಾರಕ್ಕೆ ತಿರುಗಿರುವ ಹೋರಾಟ ಮತ್ತಷ್ಟು ತಾರಕಕ್ಕೆ ಏರುವಂತಾಗಿದೆ. ರೊಚ್ಚಿಗೆದ್ದಿರುವ ಹೋರಾಟಗಾರರು ನಗರದ ರೈಲು, ಬಸ್‌ ಸಂಚಾರವನ್ನು ಸಂಪೂರ್ಣವಾಗಿ ನಿಲುಗಡೆ ಮಾಡಿ ಭಾರೀ ಪ್ರತಿಭಟನೆ ನಡೆಸಿದ್ದಾರೆ. ಅತ್ತ, ನಗರದ ಆಸ್ಪತ್ರೆಯರ ಐಸಿಯುನಲ್ಲಿ ಚಿಕಿತ್ಸೆಗೊಳಗಾಗಿರುವ ಹೋರಾಟಗಾರನ ಪರಿಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next