Advertisement

ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌ ಗೂ ಸೋಲಿನ ಆಘಾತ

06:25 AM Nov 17, 2018 | Team Udayavani |

ಹಾಂಕಾಂಗ್‌: ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನ ಮುಂದುವರಿದಿದೆ. ಪಿ.ವಿ. ಸಿಂಧು ಸೋಲಿನ ಬಳಿಕ ಪುರುಷರ ಸಿಂಗಲ್ಸ್‌ ವಿಭಾಗದ ನೆಚ್ಚಿನ ಆಟಗಾರ ಕೆ. ಶ್ರೀಕಾಂತ್‌ ಕೂಡ ಪರಾಭವಗೊಂಡು ಕೂಟದಿಂದ ನಿರ್ಗಮಿಸಿದ್ದಾರೆ.

Advertisement

ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಜಪಾನಿನ ಕೆಂಟ ನಿಶಿಮೊಟೊ 21-17, 21-13 ನೇರ ಗೇಮ್‌ಗಳಿಂದ ಭಾರತೀಯನ ಆಟಕ್ಕೆ ತೆರೆ ಎಳೆದರು. 42 ರ್ಯಾಲಿಗಳೊಂದಿಗೆ ಮೆರೆದ ನಿಶಿಮೊಟೊ ಸತತ 7 ಅಂಕಗಳನ್ನು ಬುಟ್ಟಿಗೆ ಹಾಕಿಕೊಂಡು ಸಂಪೂರ್ಣ ಮೇಲುಗೈ ಸಾಧಿಸಿದರು.

ಶ್ರೀಕಾಂತ್‌ ಮೊದಲ ಗೇಮ್‌ನಲ್ಲಿ ಉತ್ತಮ ಪ್ರತಿರೋಧ ತೋರಿದರು. ಆದರೆ ದ್ವಿತೀಯ ಗೇಮ್‌ ವೇಳೆ ಸಂಪೂರ್ಣವಾಗಿ ಹಿಡಿತ ಕಳೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next