Advertisement

ಧಾರಾವಿಯ ಒಂದು ದಶಲಕ್ಷ ನಿವಾಸಿಗಳ ಮನೆ-ಮನೆ ಪರೀಕ್ಷೆ

12:55 PM Apr 13, 2020 | mahesh |

ಮುಂಬಯಿ: ಮಹಾರಾಷ್ಟ್ರ ವೈದ್ಯಕೀಯ ಮಂಡಳಿಯ ಅಧಿಕಾರಿ ಗಳು ಧಾರಾವಿಯ ಸುಮಾರು ಒಂದು ದಶಲಕ್ಷ ನಿವಾಸಿಗಳ ಮನೆ- ಮನೆ ಪರೀಕ್ಷೆಯನ್ನು ಶನಿವಾರ ಪ್ರಾರಂಭಿಸಿದರು. ಮುಂಬಯಿಯ ಅತಿದೊಡ್ಡ ಕೊಳೆಗೇರಿ ಧಾರಾವಿಯಲ್ಲಿ ಕೋವಿಡ್‌ -19 ಪ್ರಕರಣಗಳು ಹೆಚ್ಚುತ್ತಿವೆ ಮತ್ತು ವೈರಸ್‌ ಹರಡುವುದನ್ನು ತಡೆಗಟ್ಟುವಲ್ಲಿ ರಾಜ್ಯ ಸರಕಾರ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಮುಂದಿನ 10 ದಿನಗಳಲ್ಲಿ, ವೈದ್ಯರು ಮತ್ತು ನಾಗರಿಕ ಅಧಿಕಾರಿಗಳ ತಂಡವು ನಿವಾಸಿಗಳನ್ನು ನಿರಂತರವಾಗಿ ತಪಾಸಣೆ ನಡೆಸಲಿದೆ.

Advertisement

ಶುಕ್ರವಾರ, ಧಾರಾವಿ 11 ಹೊಸ ಕೋವಿಡ್‌ -19 ಪ್ರಕರಣಗಳನ್ನು ವರದಿ ಮಾಡಿದ್ದು, ಇಲ್ಲಿನ ಕೊರೊನಾ ಪೀಡಿತರ ಸಂಖ್ಯೆ 28ಕ್ಕೆ ತಲುಪಿದೆ. ಮೂವರು ಧಾರಾವಿ ನಿವಾಸಿಗಳು ಈವರೆಗೆ ಈ ಕಾಯಿಲೆಗೆ ಬಲಿಯಾಗಿ¨ªಾರೆ. ಧಾರಾವಿ ತನ್ನ ಮೊದಲ ಕೋವಿಡ್‌ -19 ಪ್ರಕರಣವನ್ನು ಎಪ್ರಿಲ್‌ 1 ರಂದು ದಾಖಲಿಸಿದೆ.

ಮುಂಬಯಿಯ ಅತ್ಯಂತ ಜನ ದಟ್ಟಣೆಯ ಕೊಳೆಗೇರಿಗಳಲ್ಲಿ ಒಂದಾ ಗಿರುವ ಧಾರಾವಿ ನಿವಾಸಿಗಳು ಸರಾಸರಿ ಮುಂಬಯಿ ನಿವಾಸಿಗಳಿಗಿಂತ ಹೆಚ್ಚು ರೋಗಕ್ಕೆ ತುತ್ತಾಗುವ ಅಪಾಯವಿದೆ.

ಪರೀಕ್ಷೆಯ ನಂತರ, ಶಂಕಿತ ಪ್ರಕರಣಗಳನ್ನು ದಕ್ಷಿಣ ಮುಂಬಯಿಯ ವರ್ಲಿಯ ನ್ಯಾಷನಲ್‌ ನ್ಪೋಟ್ಸ್ ಕ್ಲಬ್‌ ಆಫ್ ಇಂಡಿಯಾ (ಎನ್‌ಎಸ್‌ಸಿಐ) ಇಲ್ಲಿ ಕ್ವಾರಂಟೈಗೆ ಒಳಪಡಿಸಲಾಗಿದೆ. ರಾಜ್ಯ ಸರ್ಕಾರವು ಎನ್‌ಎಸ್‌ಸಿಐ ಅನ್ನು 300 ಹಾಸಿಗೆಗಳನ್ನು ಹೊಂದಿರುವ ಬƒಹತ್‌ ಸಂಪರ್ಕತಡೆಯ ಕೇಂದ್ರವಾಗಿ ಪರಿವರ್ತಿಸಿದೆ.

ಜಿ-ಸೌತ್‌ ವಾರ್ಡ್‌ನಲ್ಲಿ ನಮ್ಮ ಸಂಪರ್ಕ ಪತ್ತೆ ಮತ್ತು ಪರೀಕ್ಷೆಯನ್ನು ಹೆಚ್ಚಿಸುವಾಗ ಎನ್‌ಎಸ್‌ಸಿಐ ಡೋಮ್‌ ಬೃಹತ್‌ ಸಂಪರ್ಕ ತಡೆಯ ಕೇಂದ್ರವಾಗಿ ಪರಿವರ್ತಿಸಲಾಗುತ್ತಿದೆ. ಇಲ್ಲಿಯವರೆಗೆ, ನಮ್ಮ ಸಂಪರ್ಕ ಪತ್ತೆಹಚ್ಚುವಿಕೆ ಅತ್ಯಧಿಕ ಪ್ರಮಾಣದಲ್ಲಿ ನಡೆದಿದೆ. ವಾಹಕಗಳು ತಮ್ಮ ಸುರಕ್ಷತೆಗಾಗಿ ಮತ್ತು ಪ್ರತ್ಯೇಕ ವಾಗಿರುವುದನ್ನು ಖಚಿತ ಪಡಿಸಿ ಕೊಳ್ಳುವುದು ಮುಖ್ಯವಾಗಿದೆ ಎಂದು ಪ್ರವಾಸೋದ್ಯಮ ಮತ್ತು ಪರಿಸರ ಸಚಿವ ಆದಿತ್ಯ ಠಾಕ್ರೆ ಅವರು ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next