Advertisement

ನಿಷೇಧಾಜ್ಞೆ ನಡುವೆ ಪ್ರತಿಭಟನೆಗೆ ಮುಂದಾದ ಮುಖಂಡರಿಗೆ ಗೃಹಬಂಧನ

09:56 AM Dec 20, 2019 | keerthan |

ಚಿಕ್ಕಮಗಳೂರು:  ಪೌರತ್ವ ಕಾಯ್ದೆ ತಿದ್ದುಪಡಿಗೆ ವಿರೋಧಿಸಿ ಪ್ರತಿಭಟನೆಗೆ ಮುಂದಾದ ಎಡಪಕ್ಷಗಳ ಮುಖಂಡರನ್ನು ಪಕ್ಷದ ಕಚೇರಿಯಲ್ಲಿಯೇ ಪೊಲೀಸರು ಗೃಹ ಬಂಧನದಲ್ಲಿರಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

Advertisement

ನಿಷೇಧಾಜ್ಞೆ ಹಿನ್ನೆಲೆ ಪ್ರತಿಭಟನೆ ನಡೆಸದಂತೆ ಮನವೊಲಿಕೆಗೆ ಮುಂದಾದ ಪೊಲೀಸರ ಮತ್ತು ಎಡಪಕ್ಷಗಳ ಮುಖಂಡರ ನಡುವೆ ವಾಗ್ವಾದ ನಡೆಯಿತು.

ಚಿಕ್ಕಮಗಳೂರಿನ ತಮಿಳು ಕಾಲೋನಿಯ ಸಿಪಿಐ ಕಚೇರಿಯಲ್ಲಿ ಏಕಾಂಗಿಯಾಗಿ ಪಕ್ಷದ ಬಾವುಟ ಹಿಡಿದ ಪ್ರತಿಭಟನೆಗೆ ಸಿಪಿಐ ಮುಖಂಡ ಅಮ್ಜದ್ ಮುಂದಾದರು.

ಇದರಿಂದಾಗಿ ಪರಿಸ್ಥಿತಿಯನ್ನು ನಿಯಂತ್ರಿಸಲು ಮುಖಂಡರನ್ನು ಪಕ್ಷದ ಕಚೇರಿಯಲ್ಲೇ ಗೃಹಬಂಧನದಲ್ಲಿರಿಸಿದರು. ನಂತರ ಕಚೇರಿ ಹೊರಗೆ ಪೊಲೀಸರು ಕಾವಲು ನಿಂತರು.

Advertisement

Udayavani is now on Telegram. Click here to join our channel and stay updated with the latest news.

Next