Advertisement

ವಿಶೇಷ ಪೂಜೆ-ಸಾಧಕರಿಗೆ ಗೌರವಾರ್ಪಣೆ

11:17 AM Apr 23, 2021 | Team Udayavani |

ಮುಂಬಯಿ: ಮೀರಾರೋಡ್‌ ಶ್ರೀ ಶನೀಶ್ವರ ಮಂದಿರದಲ್ಲಿ ಇತ್ತೀಚೆಗೆ ನಡೆದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಾಧಕರನ್ನು ಅಭಿನಂದಿಸಿ ಗೌರವಿಸಲಾಯಿತು.ಭಾರತ್‌ ಕೋ. ಆಪರೇಟಿವ್‌ ಬ್ಯಾಂಕ್‌ ಇದರ ಲ್ಯಾಮಿಂಟನ್‌ರೋಡ್‌ ಶಾಖೆಯ ಪ್ರಬಂಧಕಾರದ ವೀರೇಂದ್ರ ಕುಂದರ್‌ ಮತ್ತು ಶನಿ ಮಹಾತ್ಮ ಪೂಜಾ ಸಮಿತಿ ಖಾರ್‌ ರೋಡ್‌ ಇದರ ಜತೆ ಕೋಶಾಧಿಕಾರಿ ನಾಗೇಶ್‌ ಸುವರ್ಣ ಅವರನ್ನು ಮಂದಿರದ ವತಿಯಿಂದ ವಿದ್ವಾನ್‌ ವಿಷ್ಣು ಮೂರ್ತಿ ಅಡಿಗ ಮತ್ತು ಗೌರವ ಅಧ್ಯಕ್ಷರಾದ ವಿನೋದ್‌ ವಾಘಸಿಯಾ ಅವರು ದೇವರ ಮಹಾಪ್ರಸಾದವನ್ನಿತ್ತು ಗೌರವಿಸಿ ಶುಭಹಾರೈಸಿದರು.

Advertisement

ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಗುಣಕಾಂತ್‌ ಶೆಟ್ಟಿ ಕರ್ಜೆ, ಕೋಶಾಧಿಕಾರಿ ಅಚ್ಚುತಾ ಕೋಟ್ಯಾನ್‌, ಪೂಜಾ ಸಮಿತಿಯ ಭುವಾಜಿ ನಾರಾಯಣ ಶೆಟ್ಟಿ, ಜತೆ ಕೋಶಾಧಿಕಾರಿ ಜಯಕರ ಶೆಟ್ಟಿ ಮುದ್ರಾಡಿ, ಉಷಾ ದಿನೇಶ್‌ ಶೆಟ್ಟಿಗಾರ್‌, ಶಕುಂತಳಾ ಶೆಟ್ಟಿ, ಕಸ್ತೂರಿ ಶೆಟ್ಟಿ, ವಿನಯ್‌ ಹರೀಶ್‌ ಶೆಟ್ಟಿ, ಕಾರ್ಯಾ ಶೆಟ್ಟಿಗಾರ್‌, ಜಯೇಶ್‌ ಸುವರ್ಣ, ಶ್ರೇಯಸ್‌, ಅರ್ಚಕರಾದ ನೀರವ್‌ ಭಟ್‌ ಮೊದಲಾದವರು ಉಪಸ್ಥಿತರಿದ್ದರು. ಕಾರ್ಕಳ ಸದಾನಂದ ಪೂಜಾರಿ ಅವರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next