Advertisement

ಹರ್ಮನ್‌ಪ್ರೀತ್‌ ಸಿಂಗ್‌ ಮೇಲೆ ಒತ್ತಡ: ಕೋಚ್‌ ಗ್ರಹಾಂ ರೀಡ್‌

11:19 PM Jan 11, 2023 | Team Udayavani |

ಹೊಸದಿಲ್ಲಿ: ಭಾರತ ತಂಡದ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಅವರು ಶುಕ್ರವಾರದಿಂದ ಆರಂಭವಾಗುವ ಪುರುಷರ ಹಾಕಿ ವಿಶ್ವಕಪ್‌ ಕೂಟದಲ್ಲಿ ಪ್ರಮುಖ ಆಕರ್ಷಣೆಯ ಆಟಗಾರರಲ್ಲಿ ಒಬ್ಬರಾಗಿದ್ದಾರೆ. ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲಾಗಿ ಪರಿವರ್ತಿಸಲು ನಿಸ್ಸೀಮರಾಗಿರುವ ಅವರು ಬಹಳಷ್ಟು ಒತ್ತಡದಿಂದ ಆಡಬೇಕಾಗಿದೆ ಎಂದು ತಂಡದ ಮುಖ್ಯ ಕೋಚ್‌ ಗ್ರಹಾಂ ರೀಡ್‌ ಹೇಳಿದ್ದಾರೆ.

Advertisement

ಹರ್ಮನ್‌ಪ್ರೀತ್‌ ಅವರೊಬ್ಬ ವಿಶ್ವದ ಶ್ರೇಷ್ಠ ಪೆನಾಲ್ಟಿ ಕಾರ್ನರ್‌ ತಜ್ಞರೆಂದು ಪರಿಗಣಿಸಲ್ಪಟ್ಟಿದ್ದಾರೆ. ಆದರೆ ತಂಡದ ಇತರ ಡ್ರ್ಯಾಗ್‌ಫ್ಲಿಕರ್‌ಗಳಾದ ಉಪನಾಯಕ ಅಮಿತ್‌ ರೋಹಿದಾಸ್‌, ವರುಣ್‌ ಕುಮಾರ್‌ ಮತ್ತು ನಿಲಮ್‌ ಸಂಜೀಪ್‌ ಕ್ಸೆಸ್‌ ಅವರು ನಾಯಕನ ಮೇಲಿರುವ ಜವಾಬ್ದಾರಿಯನ್ನು ಹಂಚಿಕೊಂಡರೆ ಭಾರತ ಶ್ರೇಷ್ಠ ನಿರ್ವಹಣೆ ನೀಡುವ ಸಾಧ್ಯತೆಯಿದೆ ಎಂದರು.

ಶುಕ್ರವಾರ ನಡೆಯುವ ಪಂದ್ಯದಲ್ಲಿ ಭಾರತವು ಸ್ಪೇನ್‌ ತಂಡವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ. ನಾವೀಗ ಸ್ಪೇನ್‌ ತಂಡದ ಬಗ್ಗೆ ಮಾತ್ರ ಚಿಂತೆ ಮಾಡುತ್ತಿದ್ದೇವೆ,. ಆಬಳಿಕ ನಾವು ಇಂಗ್ಲೆಂಡ್‌, ವೇಲ್ಸ್‌ ತಂಡವನ್ನು ಎದುರಿಸಲಿದ್ದೇವೆ. ಬಣದಲ್ಲಿ ನಡೆಯುವ ಎಲ್ಲ ಪಂದ್ಯಗಳು ನಮ್ಮ ಪಾಲಿಗೆ ಅತೀಮುಖ್ಯವಾಗಿದೆ. ಉತ್ತಮ ಆರಂಭಕ್ಕಾಗಿ ನಾವು ಪ್ರಯತ್ನಿಸಲಿದ್ದೇವೆ ಎಂದು ರೀಡ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next