Advertisement

ಪೌರತ್ವದ ಕಿಚ್ಚಿನ ನಡುವೆ ಅಂತರ್ ಧರ್ಮೀಯ ವಿವಾಹ; ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿಯ ಮದುವೆ

09:57 AM Dec 20, 2019 | keerthan |

ಚಿಕ್ಕಬಳ್ಳಾಪುರ: ರಾಷ್ಟ್ರದಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ದ ತೀವ್ರ ಹೋರಾಟ ನಡೆಯುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಗೌರಿಬಿದನೂರಲ್ಲಿ ಬಿಜೆಪಿ ಮುಖಂಡರ ಪೌರೋಹಿತ್ಯದಲ್ಲಿ ಹಿಂದೂ ಯುವಕ ಮುಸ್ಲಿಂ ಯುವತಿಯೊಂದಿಗೆ ವಿವಾಹ ಆಗಿರುವ ಘಟನೆ ನಡೆದಿದೆ.

Advertisement

ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವತ್ಥದಲ್ಲಿ ವಿವಾಹ ಕಾರ್ಯಕ್ರಮ ನಡೆದಿದ್ದು, ಮಂಜುನಾಥ್ ಜೊತೆ ಸುಹಾನ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಇವರು ಗೌರಿಬಿದನೂರು ನಗರದ ಉಪ್ಪಾರಕಾಲೋನಿ ನಿವಾಸಿಗಳಾಗಿದ್ದಾರೆ.

ಯುವತಿಯ ಪೋಷಕರ ಜೊತೆ ಸಂಧಾನಕ್ಕೆ ಪ್ರಯತ್ನಿಸಿದ್ದ ಬಿಜೆಪಿ ಮುಖಂಡರ ಸಂಧಾನ ವಿಫಲವಾಗಿದ್ದು ಯುವತಿ ಪೋಷಕರ ವಿರೋಧದ‌ ನಡುವೆ ವಿವಾಹ ನಡೆದಿದೆ.

ಪರಸ್ಪರ ಪ್ರೀತಿಸುತ್ತಿದ್ದ ಸುಹಾನಾ ಹಾಗೂ ಮಂಜುನಾಥ್ ಇಂದು ದಾಂಪತ್ಯ ಜೀವನಕ್ಕೆ‌‌ ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ್ದಿದ್ದಾರೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ಬಿಜೆಪಿ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ರವಿನಾರಾಯಣ ರೆಡ್ಡಿ ಮುಂದಾಳತ್ವದಲ್ಲಿ ವಿವಾಹ ನಡೆದಿದ್ದು, ಅವರು ಸದ್ಯ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿಯ ಹಾಲಿ ಸದಸ್ಯರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next