Advertisement

ರಾಹುಲ್‌ ಗಾಂಧಿ ವನವಾಸಕ್ಕೆ ತೆರಳಿದ್ದಾರೆ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ವ್ಯಂಗ್ಯ

11:43 PM May 07, 2023 | Team Udayavani |

ಮಂಗಳೂರು: ರಾಜ್ಯಕ್ಕೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಪ್ರಚಾರಕ್ಕೆ ಬರುವುದನ್ನೇ ನಿಲ್ಲಿಸಿ ವನವಾಸಕ್ಕೆ ತೆರಳಿದ್ದಾರೆ. ರಾಜ್ಯದ ರಾಜಕೀಯ ಚಿತ್ರಣ ಸಂಪೂರ್ಣ ಸ್ಪಷ್ಟಗೊಂಡಿದ್ದು, ಬಿಜೆಪಿ 150ರಷ್ಟು ಸೀಟು ಗಳಿ ಸುವುದರಲ್ಲಿ ಸಂದೇಹವೇ ಇಲ್ಲ ಎಂದು ಅಸ್ಸಾಂ ಮುಖ್ಯಮಂತ್ರಿ ಡಾ| ಹಿಮಂತ ಬಿಸ್ವಾ ಶರ್ಮಾ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಹುಲ್‌ ಗಾಂಧಿ ಯವರು ಹಲವು ದಿನಗಳಿಂದ ಪ್ರಚಾರದಿಂದ ದೂರ ಉಳಿದಿದ್ದರು. ಅವರಿಗೇ ಗ್ಯಾರಂಟಿ ಇಲ್ಲ ಎಂದ ಮೇಲೆ ಇನ್ನು ಕಾಂಗ್ರೆಸಿಗರು ಜನರಿಗೆ ಗ್ಯಾರಂಟಿ ಕೊಡಲು ಹೊರಟಿದ್ದಾರೆ. ಗ್ಯಾರಂಟಿ ಇಲ್ಲದ ಕಾರಣಕ್ಕೆ ರಾಹುಲ್‌ ಕಳೆದ ಬಾರಿ ಎರಡು ಕ್ಷೇತ್ರಗಳಲ್ಲಿ ಲೋಕಭಾ ಚುನಾವಣೆಗೆ ನಿಂತಿದ್ದರು. ಅಮೇಠಿಯ ಜನತೆ ರಾಹುಲ್‌ ಗಾಂಧಿಯ ಗ್ಯಾರಂಟಿಯನ್ನು ನಂಬಲಿಲ್ಲ.

ರಾಹುಲ್‌ ಗಾಂಧಿಯನ್ನು ಮುನ್ನೆಲೆಗೆ ತರಲು ಸೋನಿಯಾ ಗಾಂಧಿ 20 ವರ್ಷಗಳಿಂದ ಹೋರಾಡುತ್ತಿದ್ದಾರೆ, ಆದರೆ ಪ್ರಯೋ ಜನವಾಗುತ್ತಿಲ್ಲ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಮುಸ್ಲಿಮರಿಗೆ ಮೀಸಲು ನೀಡುವುದಾಗಿ ಪ್ರಿಯಾಂಕಾ ಗಾಂಧಿ ಅವರು ಭರವಸೆ ನೀಡುತ್ತಿದ್ದಾರೆ. ಇಷ್ಟು ವರ್ಷ ದೇಶವನ್ನು ಆಳಿದ ಕಾಂಗ್ರೆಸ್‌ಗೆ ಕನಿಷ್ಠ ಮೂಲಸೌಕರ್ಯ ನೀಡಲು ಸಾಧ್ಯವಾಗಿಲ್ಲ. ಇದು ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗ ಸಾಧ್ಯವಾಗಿದೆ ಎಂದು ಅವರು ಹೇಳಿದರು.

ಸೆಲ್ಫ್ಗೋಲ್‌ ಅಲ್ಲ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವುದಾಗಿ ಹೇಳಿರುವುದನ್ನು ಅನೇಕರು ಸೆಲ್ಫ್ ಗೋಲ್‌ ಎನ್ನುತ್ತಿದ್ದಾರೆ. ಆದರೆ ವಿಷಯ ಹಾಗಿಲ್ಲ, ಅದು ಅವರ ನೈಜ ಉದ್ದೇಶ ಹಾಗೂ ಸರಿಯಾಗಿ ಯೋಚಿಸಿ ತೆಗೆದು ಕೊಂಡಿರುವ ನಿರ್ಧಾರ ಎಂದು ಹಿಮಂತ ಹೇಳಿದರು.

Advertisement

ಹಿಂದೂ ಸಂಸ್ಕೃತಿ, ಪರಂಪರೆಯನ್ನು ಕಾಂಗ್ರೆಸ್‌ ದ್ವೇಷಿಸು ತ್ತದೆ. ಪಿಎಫ್ಐ ಸಂಘಟನೆಯನ್ನು ನಿಷೇಧಿಸಿ ದಾಗ ಕಾಂಗ್ರೆಸ್‌ ಸ್ವಾಗತಿಸಲಿಲ್ಲ. ಈಗ ಪಿಎಫ್ಐ ಜತೆ ಒಂದೇ ತಕ್ಕಡಿಯಲ್ಲಿ ಬಜರಂಗ ದಳವನ್ನು ಇರಿಸುವ ಮೂಲಕ ಸೇಡಿನ ರಾಜ ಕಾರಣಕ್ಕೆ ಮುಂದಾಗಿದ್ದಾರೆ ಎಂದರು.

ಬಜರಂಗದಳ ಬಲಪಂಥೀಯ ಸಂಘಟನೆ ಆಗಿರಬಹುದು, ನೈತಿಕ ಪೊಲೀಸ್‌ಗಿರಿ ಮಾಡಿರಬಹುದು, ಆದರೆ ದೇಶದ್ರೋಹಿಯಲ್ಲ, ಪಿಎಫ್ಐ ಜತೆ ಕಾಂಗ್ರೆಸ್‌ ಟಿ-20 ಆಟ ಆಡುತ್ತಿದೆ ಎಂದು ಅವರು ಟೀಕಿಸಿದರು.

ಒಂದು ಸಾವಿರ ಕೋಟಿ ರೂ.
ನಿಂದ 15 ಸಾವಿರ ಕೋಟಿ ರೂ.ಗೆ ಆದಾಯ ಹೆಚ್ಚಿಸಿಕೊಂಡ ಡಿ.ಕೆ. ಶಿವಕುಮಾರ್‌ಗೆ ಭ್ರಷ್ಟಾಚಾರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್‌ನಲ್ಲಿ ಶೇ. 85 ಕಮಿಷನ್‌ ಇದ್ದು, ಎಷ್ಟು ಮಂದಿ ಇದಕ್ಕಾಗಿ ಕೋರ್ಟ್‌ಗೆ ಹಾಜರಾಗುತ್ತಿದ್ದಾರೆ ಎಂಬುದನ್ನು ಕಾಂಗ್ರೆಸಿಗರು ಆತ್ಮ ವಿಮರ್ಶೆ ಮಾಡಿಕೊಳ್ಳಲಿ ಎಂದು ಅವರು ಹೇಳಿದರು. ರಾಜ್ಯ ಬಿಜೆಪಿ ವಕ್ತಾರ ಕ್ಯಾ| ಗಣೇಶ್‌ ಕಾರ್ಣಿಕ್‌, ಜಿಲ್ಲಾ ವಕ್ತಾರರಾದ ಜಗದೀಶ್‌ ಶೇವಣ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next