Advertisement

ಇಂದು ಹಿಮಾಚಲ ಸಂಪುಟ ವಿಸ್ತರಣೆ; ದಿ|ವೀರಭದ್ರ ಸಿಂಗ್‌ ಪುತ್ರ ಸೇರಿ 7 ಮಂದಿ ಪ್ರಮಾಣ

01:00 AM Jan 08, 2023 | Team Udayavani |

ಶಿಮ್ಲಾ/ಹೊಸದಿಲ್ಲಿ: ಹಿಮಾಚಲ ಪ್ರದೇಶ ಅಧಿಕಾರದ ಗಾದಿಗೆ ಹಿಡಿದ ತಿಂಗಳ ಬಳಿಕ ಸುಖ್ವಿಂದರ್ ಸಿಂಗ್‌ ಸುಖು ನೇತೃತ್ವದ ಸಂಪುಟ ರವಿವಾರ ವಿಸ್ತರಣೆ ಯಾಗಲಿದೆ.

Advertisement

ಮಾಜಿ ಸಿಎಂ ದಿ| ವೀರಭದ್ರ ಸಿಂಗ್‌ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್‌, ಧನಿರಾಮ್‌ ಶಾಂಡಿಲ್‌, ಹರ್ಷವರ್ಧನ್‌ ಚೌಹಾಣ್‌ ಸಹಿತ ಏಳು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ಶನಿವಾರ ದೃಢಪಡಿಸಿವೆ.

ಹೊಸದಿಲ್ಲಿಗೆ ತೆರಳಿ ಹೈಕಮಾಂಡ್‌ ಜತೆಗೆ ಸಿಎಂ ಸುಖು ಮಾತುಕತೆ ನಡೆಸಿದ ಬೆನ್ನಲ್ಲೇ, ರವಿವಾರ ಸಚಿವ ಸಂಪುಟ ವಿಸ್ತರಣೆಯಾಗಲಿದೆ.

ರಾಜ್ಯಪಾಲ ರಾಜೇಂದ್ರ ವಿಶ್ವನಾಥ್‌  ಜ. 8ರಂದು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿ ಸಲಿದ್ದಾರೆ. ಕಾರ್ಯಕ್ರಮ ದಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಕೂಡ ಭಾಗವಹಿಸ ಲಿದ್ದಾರೆ. ಪ್ರಾದೇಶಿಕ, ಜಾತಿ, ಬಣಗಳ ವಿಚಾರದಲ್ಲಿ ಸಮತೋಲನ ಕಾಪಾಡಿಕೊ ಳ್ಳುವುದರ ಜತೆಗೆ ಹೊಸ ಪ್ರತಿಭೆಗಳಿಗೂ ಸಂಪುಟದಲ್ಲಿ ಅವಕಾಶ ನೀಡುವ ಹಿನ್ನೆಲೆಯಲ್ಲಿ ವಿಸ್ತರಣೆ ವಿಳಂಬವಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next