Advertisement

ಐಎನ್‌ಎಕ್ಸ್‌ ಕೇಸು ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ

10:19 PM May 18, 2021 | Team Udayavani |

ನವದೆಹಲಿ: ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಇತರರ ವಿರುದ್ಧದ ಐಎನ್‌ಎಕ್ಸ್‌ ಮಾಧ್ಯಮ ಲಂಚ ಪ್ರಕರಣದಲ್ಲಿ ಕೆಳಹಂತದ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಗೆ ದೆಹಲಿ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

Advertisement

ಕೆಳ ಹಂತದ ಕೋರ್ಟ್‌ ದಾಖಲೆಗಳ ಪರಿಶೀಲನೆಗೆ ನೀಡಿದ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್‌ನ ನ್ಯಾ.ಸುರೇಶ್‌ ಕುಮಾರ್‌ ಕೈಟ್‌ ನೇತೃತ್ವದ ನ್ಯಾಯಪೀಠ ಈ ನಿರ್ಧಾರ ಪ್ರಕಟಿಸಿದೆ. ಜತೆಗೆ ಚಿದು, ಪುತ್ರ ಕಾರ್ತಿ ಚಿದಂಬರಂಗೆ ನೋಟಿಸ್‌ ನೀಡಿದೆ.

ಮಾ.5ರಂದು ವಿಶೇಷ ಕೋರ್ಟ್‌ ಆರೋಪಿಗಳ ಪರ ವಕೀಲರು ವಶಪಡಿಸಿಕೊಂಡ ಆಸ್ತಿ ಇರಿಸುವ ಕೇಂದ್ರದಲ್ಲಿರುವ ದಾಖಲೆಗಳನ್ನು ಪರಿಶೀಲಿಸಲು ಅವಕಾಶ ನೀಡಿದ್ದನ್ನು ಸಿಬಿಐ ಪ್ರಶ್ನಿಸಿತ್ತು.

ಇದನ್ನೂ ಓದಿ :ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

Advertisement

Udayavani is now on Telegram. Click here to join our channel and stay updated with the latest news.

Next