Advertisement

Corruption Case: ಕೇಂದ್ರ ಸಚಿವ ಶೆಖಾವತ್‌ ಬಂಧನಕ್ಕೆ ರಾಜಸ್ಥಾನ ಉಚ್ಚ ನ್ಯಾಯಪೀಠ ತಡೆ

10:06 PM Apr 13, 2023 | Team Udayavani |

ನವದೆಹಲಿ: ಸಂಜೀವಿನಿ ಸಾಲ ಸಹಕಾರ ಸಂಘದ ಹಗರಣ ಸಂಬಂಧಿಸಿದಂತೆ ಬಂಧನ ಭೀತಿ ಎದುರುಸಿತ್ತಿದ್ದ ಕೇಂದ್ರ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಅವರಿಗೆ ರಾಜಸ್ಥಾನ ಉಚ್ಚ ನ್ಯಾಯಪೀಠ ಕೊಂಚ ನಿರಾಳತೆ ನೀಡಿದ್ದು, ಶೆಖಾವತ್‌ ಬಂಧನಕ್ಕೆ ತಡೆ ನೀಡಿದೆ.

Advertisement

ರಾಜಸ್ಥಾನ ವಿಶೇಷ ತನಿಖಾ ತಂಡ ವಿಚಾರಣೆ ನಡೆಸುತ್ತಿರುವ 900 ಕೋಟಿ ರೂ.ಗಳ ಪತ್ತಿನ ಸಹಕಾರ ಸಂಘದ ಹಗರಣದಲ್ಲಿ ಶೆಖಾವತ್‌ ಹಾಗೂ ಅವರ ಕುಟುಂಬದ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಂಧನಕ್ಕೆ ತಡೆ ಕೋರಿದ್ದಲ್ಲದೇ, ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವಂತೆ ಕೋರಿ ಮಾ.24ರಂದು ಶೆಖಾವತ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿ ಕುಲದೀಪ್‌ ಮಾಥುರ್‌ ಅವರ ನ್ಯಾಯಪೀಠ ಅರ್ಜಿ ಆಲಿಸಿ, ಬಂಧನಕ್ಕೆ ತಡೆ ನೀಡಿದೆ. ಅಲ್ಲದೇ 3 ವಾರಗಳ ಬಳಿಕ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next