Advertisement

ಭಗೀರಥ ಗಡ್ಡಪ್ಪ

06:00 AM Sep 21, 2018 | Team Udayavani |

“ತಿಥಿ’ ನಂತರ ಗಡ್ಡಪ್ಪ ಹಾಗೂ ಸೆಂಚುರಿ ಗೌಡ ಅವರನ್ನು ಹಾಕಿಕೊಂಡು ಅದೆಷ್ಟು ಸಿನಿಮಾಗಳು ಬಂದವೋ ಲೆಕ್ಕವಿಲ್ಲ. ಆದರೆ, ಬಹುತೇಕ ಸಿನಿಮಾಗಳಲ್ಲಿ ಅವರನ್ನು ಡಬಲ್‌ ಮೀನಿಂಗ್‌ ಸಂಭಾಷಣೆಗಷ್ಟೇ ಬಳಸಲಾಗಿದೆ. ಈಗ ಆ ಜೋಡಿಯ ಮತ್ತೂಂದು ಸಿನಿಮಾ ಇಂದು ತೆರೆಕಾಣುತ್ತಿದೆ. ಅದು “ಗಡ್ಡಪ್ಪನ್‌ ದುನಿಯಾ’. ಅನಿಲ್‌ ವೆಂಕಟ್‌ರಾಜು ಹಾಗೂ ಸುನಿಲ್‌ ರೆಡ್ಡಿ ಸೇರಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಜಿತ್‌ ಗೌಡ ಈ ಚಿತ್ರದ ನಿರ್ಮಾಪಕರು. ನಿರ್ದೇಶಕ ಅನಿಲ್‌  ಹೇಳುವಂತೆ ಇದು ಡಬಲ್‌ ಮೀನಿಂಗ್‌ ಇಲ್ಲದ ಸಿನಿಮಾ. ಗಡ್ಡಪ್ಪ ಹಾಗೂ ಸೆಂಚುರಿ ಗೌಡ ಇಬ್ಬರನ್ನು ತುಂಬಾ ನೀಟಾಗಿ ತೋರಿಸಿದ್ದಾರಂತೆ. ಇನ್ನು “ಗಡ್ಡಪ್ಪನ್‌ ದುನಿಯಾ’ ಚಿತ್ರ ಹಳ್ಳಿಯೊಂದರಲ್ಲಿ ನಡೆಯುವ ಕಥೆಯನ್ನು ಹೊಂದಿದೆ. 

Advertisement

“ಒಂದು ಹಳ್ಳಿಯಲ್ಲಿ ಬರಗಾಲ ಉಂಟಾಗಿ ನೀರಿನ ಸಮಸ್ಯೆ ಎದುರಾಗುತ್ತದೆ. ಆಗ ಗಡ್ಡಪ್ಪ ಬತ್ತಿಹೋಗಿದ್ದ ಕೆರೆ ಕಟ್ಟೆಗಳು ನೀರಿನಿಂದ ಹೇಗೆ ತುಂಬುವಂತೆ ಮಾಡುತ್ತಾರೆ, ಬರಗಾಲದಿಂದ ಊರನ್ನು ಬಿಟ್ಟು ಪಟ್ಟಣದ ಕಡೆಗೆ ಹೊರಟಿದ್ದ ಗ್ರಾಮಸ್ಥರು ಪುನಃ ಹಳ್ಳಿಯಲ್ಲೇ ನೆಲೆಸುವಂತೆ ಹೇಗೆ ಮಾಡುತ್ತಾರೆ’ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆಯಂತೆ. 

ಚಿತ್ರದಲ್ಲಿ ನಟಿಸಿದ ಸೆಂಚುರಿ ಗೌಡ ಹಾಗೂ ಗಡ್ಡಪ್ಪ ಇಬ್ಬರು ತಮ್ಮ ಸಿನಿಮಾವನ್ನು ನೋಡಿ ಪ್ರೋತ್ಸಾಹಿಸುವಂತೆ ಕೇಳಿಕೊಂಡರು. ನಾಯಕಿ ಪ್ರಕೃತಿ ಪ್ರಕಾಶ್‌ ಅವರಿಗೆ ಇದು ಮೊದಲ ಸಿನಿಮಾ. ಇಲ್ಲಿ ಅವರು  ಗಡ್ಡಪ್ಪ ಅವರ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲುವ ಪಾತ್ರ ಮಾಡಿದ್ದಾರಂತೆ. ಛಾಯಾಗ್ರಾಹಕ ರಾಘವ್‌ ಸೇರಿದಂತೆ ಚಿತ್ರದಲ್ಲಿ ನಟಿಸಿದ ಕಲಾವಿದರು ತಮ್ಮ ಅನುಭವ ಹಂಚಿಕೊಂಡರು. 

Advertisement

Udayavani is now on Telegram. Click here to join our channel and stay updated with the latest news.

Next