Advertisement

ಥೇಣಿ ಕಾಡ್ಗಿಚ್ಚಿಗೆ ಒಂಭತ್ತು ಬಲಿ

07:30 AM Mar 13, 2018 | |

ಚೆನ್ನೈ/ತಿರುವನಂತಪುರ: ತಮಿಳುನಾಡಿನ ಥೇಣಿ ಜಿಲ್ಲೆಯ ಕುರಂಗಣಿ ಅರಣ್ಯದಲ್ಲಿ ರವಿವಾರದ ಕಾಡ್ಗಿಚ್ಚಿನಲ್ಲಿ  9 ಮಂದಿ ಅಸುನೀಗಿದ್ದಾರೆ. ಈ ಪೈಕಿ 6 ಮಂದಿ ಚೆನ್ನೈಗೆ, 3 ಮಂದಿ ಈರೋಡ್‌ಗೆ ಸೇರಿದವರು. ಇತರ 17 ಮಂದಿಯನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಅನುಮತಿ ಪಡೆಯದೇ ಚಾರಣ ಆಯೋಜನೆ ಮಾಡಿದ ವ್ಯಕ್ತಿಯನ್ನು ಚೆನ್ನೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಚೆನ್ನೈನಿಂದ 24, ಈರೋಡ್‌ ಮತ್ತು ತಿರುಪ್ಪೂರ್‌ನಿಂದ 12 ಮಂದಿ- ಹೀಗೆ ಒಟ್ಟು ಸೇರಿ 65 ಮಂದಿಯ ತಂಡ ಮಾ.10ರಂದು ಕುರಂಗಣಿ ಪರ್ವತ ಚಾರಣಕ್ಕಾಗಿ ತೆರಳಿತ್ತು. ಇವರಲ್ಲಿ 25 ಮಹಿಳೆಯರು, ಮೂವರು ಮಕ್ಕಳು ಇದ್ದರು. ಮಾ.11ರಂದು ಅವರು ಪರ್ವತ ಇಳಿದು ಬರುತ್ತಿದ್ದ ವೇಳೆ ಕಾಡ್ಗಿಚ್ಚು ಕಾಣಿಸಿಕೊಂಡಿದ್ದು, ಅವರೇ ಕುಟುಂಬ ಸದಸ್ಯರಿಗೆ, ಪೊಲೀಸರಿಗೆ ಮೊಬೈಲ್‌ ಮೂಲಕ ಮಾಹಿತಿ ನೀಡಿದ್ದರು. 

 ಈ ಬಗ್ಗೆ ಪ್ರತಿಕ್ರಿಯಿಸಿರುವ ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್‌, 4 ಹೆಲಿಕಾಪ್ಟರ್‌, ಹತ್ತು ಕಮಾಂಡೋ
ಗಳನ್ನು  ರಕ್ಷಣಾ ಕಾರ್ಯಾಚರಣೆಗೆ ಕಳುಹಿಸಲಾಗಿದೆ ಎಂದಿದ್ದಾರೆ. ಇದೇ ವೇಳೆ ಕೇರಳದ ಮುನ್ನಾರ್‌ ಪ್ರದೇಶದಲ್ಲಿಯೂ ಶೋಧ ನಡೆಸಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next