Advertisement

ಕಾರ್ಮಿಕರ ಸಮಸ್ಯೆ ಆಲಿಸಲು 20 ಕಂಟ್ರೋಲ್‌ ರೂಮ್‌ ; ದೂರು ನೀಡುವುದು ಹೇಗೆ?

06:34 PM Apr 15, 2020 | Hari Prasad |

ರಾಜ್ಯ ಸರಕಾರದ ಸಮನ್ವಯದೊಂದಿಗೆ ಈ ಕಂಟ್ರೋಲ್‌ ರೂಮ್‌ಗಳು ಕಾರ್ಯ ನಿರ್ವಹಿಸಲಿವೆ. ಫೋನ್‌, ವಾಟ್ಸ್‌ಆ್ಯಪ್‌ , ಇಮೇಲ್‌ಗ‌ಳ ಮೂಲಕ ಕಂಟ್ರೋಲ್‌ ರೂಮ್‌ಗೆ ಸಮಸ್ಯೆ ಮುಟ್ಟಿಸಬಹುದು.

Advertisement

ಆಲಿಸುವವರು ಯಾರು?
ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಸಹಾಯಕ ಕಾರ್ಮಿಕ ಆಯುಕ್ತರು, ಪ್ರಾದೇಶಿಕ ಕಾರ್ಮಿಕ ಆಯಕ್ತರು ಮತ್ತು ಆಯಾ ಪ್ರದೇಶಗಳ ಉಪ ಮುಖ್ಯ ಕಾರ್ಮಿಕ ಆಯುಕ್ತರು ಈ ಕಂಟ್ರೋಲ್‌ ರೂಮ್‌ಗೆ ಸಮನ್ವಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕೆಲಸದ ಅವಧಿ ಹೆಚ್ಚಿಸಲು ಅಧ್ಯಾದೇಶ?
ಲಾಕ್‌ಡೌನ್‌ ಮೇ 3ರ ವರೆಗೆ ವಿಸ್ತರಣೆಗೊಂಡಿರುವುದರಿಂದ ಎಲ್ಲಾ ಕ್ಷೇತ್ರಗಳ ನೌಕರರ ಕೆಲಸದ ಅವಧಿ ಹೆಚ್ಚಲಿದೆ. ಈ ಬಗ್ಗೆ ಕೇಂದ್ರ ಸರಕಾರ ಶೀಘ್ರವೇ ಅಧ್ಯಾದೇಶ ಹೊರಡಿಸುವ ಸಾಧ್ಯತೆ ಇದೆ. ಸದ್ಯ ಎಂಟು ಗಂಟೆಯ ಅವಧಿ 12 ಗಂಟೆಗೆ ಏರಿಕೆಯಾಗುವ ಸಾಧ್ಯತೆ ಇದೆ.

ಸದ್ಯದ ಪರಿಸ್ಥಿತಿ ಹಿನ್ನೆಲೆಯಲ್ಲಿ ಮತ್ತು ಉದ್ಯೋಗದ ಸ್ಥಳದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಲಾಕ್‌ಡೌನ್‌ ಮುಗಿದ ಬಳಿಕ ಈ ವ್ಯವಸ್ಥೆ ಜಾರಿಯಾಗಲಿದೆ. ಕಾರ್ಮಿಕ ಕಾಯ್ದೆಗಳನ್ನು ಸಮ್ಮಿಳನಗೊಳಿಸಿದ ಸಂಹಿತೆ ಸಂಸತ್‌ ಮುಂದೆ ಇರುವುದರಿಂದ ಅಧ್ಯಾದೇಶ ಜಾರಿಗೊಳಿಸಲಾಗುತ್ತಿದೆ.

ಕೈಗಾರಿಕಾ ಸಂಘಟನೆಗಳು ಮತ್ತು ಉದ್ಯೋಗದಾತರ ಒಕ್ಕೂಟಗಳು ಕೆಲಸದ ಅವಧಿ ಹೆಚ್ಚಿಸುವ ಬಗ್ಗೆ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದವು. ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ತೆರಳಿರುವುದರಿಂದ ಇಂಥ ಪರಿಸ್ಥಿತಿ ಎದುರಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next