Advertisement

ಮಂಗಳೂರು: ಬೈಕ್‌ ಸವಾರನ ಪ್ರಾಣ ಉಳಿಸಿದ ಹೆಲ್ಮೆಟ್‌

11:30 PM Apr 29, 2023 | Team Udayavani |

ಮಂಗಳೂರು: ಹೆಲ್ಮೆಟ್‌ ಧರಿಸಿದ್ದರಿಂದ ಪವಾಡಸದೃಶವೆಂಬಂತೆ ಸವಾರನೋರ್ವ ಪ್ರಾಣ ಉಳಿಸಿಕೊಂಡಿದ್ದಾರೆ.

Advertisement

ನಗರದ ಲಾಲ್‌ಭಾಗ್‌ ಸಿಗ್ನಲ್‌ ಬಳಿ ಶನಿವಾರ ರಾತ್ರಿ 8 ಗಂಟೆಯ ಸುಮಾರಿಗೆ ಲೇಡಿಹಿಲ್‌ ಕಡೆಯಿಂದ ಬರುತ್ತಿದ್ದ ಬೈಕ್‌ವೊಂದು ಸ್ಕಿಡ್‌ ಆಗಿ ಬಿತ್ತು. ಅದರಲ್ಲಿದ್ದ ಸವಾರ ರಸ್ತೆಗೆ ಎಸೆಯಲ್ಪಟ್ಟರು. ಆದರೆ ಅವರ ತಲೆಯಲ್ಲಿದ್ದ ಹೆಲ್ಮೆಟ್‌ ಬೇರ್ಪಟ್ಟಿರಲಿಲ್ಲ. ಇದರಿಂದಾಗಿ ಅವರಿಗೆ ಗಂಭೀರ ಗಾಯವಾಗದೆ ಪಾರಾದರು. ಕಾಂಕ್ರೀಟ್‌ ರಸ್ತೆಗೆ ಬೈಕ್‌ ಉರುಳಿಬಿದ್ದ ದೃಶ್ಯ ಭೀಕರವಾಗಿತ್ತು. ಒಂದು ವೇಳೆ ಹೆಲ್ಮೆಟ್‌ ಧರಿಸದೆ ಇದ್ದಿದ್ದರೆ ಅಥವಾ ಸಮರ್ಪಕವಾಗಿ ಲಾಕ್‌ ಮಾಡದೆ ಇರುತ್ತಿದ್ದರೆ ಪ್ರಾಣಕ್ಕೆ ಅಪಾಯವುಂಟಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ರಸ್ತೆಯಲ್ಲಿ ಡ್ರೈನೇಜ್ ನೀರು ಹರಿಯುತ್ತಿದ್ದುದೆ ಬೈಕ್‌ ಸ್ಕಿಡ್‌ ಆಗಲು ಕಾರಣ ಎಂದು ತಿಳಿದುಬಂದಿದೆ. ಬೈಕ್‌ ಉರುಳಿ ಬೀಳುವಾಗ ಅಕ್ಕಪಕ್ಕದಲ್ಲಿ ವಾಹನ, ಪಾದಚಾರಿಗಳು ಇರದಿದ್ದುರಿಂದ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next