Advertisement

ಹೆಗ್ಗಡೆ ಸೇವಾ ಸಂಘ ಮುಂಬಯಿ ವಾರ್ಷಿಕೋತ್ಸವ ಸಂಭ್ರಮಕ್ಕೆ ಚಾಲನೆ

06:07 PM Feb 05, 2020 | Suhan S |

ನವಿ ಮುಂಬಯಿ, ಫೆ. 4: ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವಾರ್ಷಿಕೋತ್ಸವ ಸಮಾರಂಭವು ಫೆ. 2ರಂದು ಬೆಳಗ್ಗೆ 7 ರಿಂದ ಐರೋಲಿಯ ಹೆಗ್ಗಡೆ ಭವನದ ಶ್ರೀಮತಿ ಜಯಂತಿ ವಿಟ್ಠಲ್‌ ಹೆಗ್ಡೆ ಮೆಮೋರಿಯಲ್‌ ಹಾಲ್‌ನಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ,ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜರಗಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಹೋಮ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಧ್ಯಾಹ್ನ ಮಹಾಆರತಿ, ತೀರ್ಥ ಪ್ರಸಾದ ವಿತರಣೆ, ಮಹಿಳಾ ವಿಭಾಗದಿಂದ ಅರಸಿನ ಕುಂಕುಮ, ಮಧ್ಯಾಹ್ನ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಅಪರಾಹ್ನ ಹೆಗ್ಗಡೆ ಸೇವಾ ಸಂಘದ ಸದಸ್ಯ ಬಾಂಧವರಿಂದ ವಿ. ಎನ್‌. ಕುಲಾಲ್‌ ವೇಣೂರು ರಚಿಸಿ, ಮನೋಹರ್‌ ಶೆಟ್ಟಿ ನಂದಳಿಕೆ ನಿರ್ದೇಶನದಲ್ಲಿ ಸಂಬಂಧದಾಯೆ…! ತುಳು ನಾಟಕ ಪ್ರದರ್ಶನಗೊಂಡಿತು.

ಸಮಾರಂಭದ ಅಧ್ಯಕ್ಷತೆಯನ್ನು ಹೆಗ್ಗಡೆ ಸೇವಾ ಸಂಘದ ಅಧ್ಯಕ್ಷ ಶಂಕರ್‌ ಆರ್‌. ಹೆಗ್ಡೆ ವಹಿಸಿದ್ದರು. ಶನಿ, ಮಹಾಕಾಳಿ ಧಾರಾವಾಹಿಯ ನಿರ್ದೇಶಕ ರಾಘವೇಂದ್ರ ಹೆಗ್ಡೆ ಇವರು ಸಮಾರಂಭವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮಂಗಳೂರು ಏಮ್‌ಟೆಕ್‌ ಇದರ ಕೆ. ಅನಿಲ್‌ ಹೆಗ್ಡೆ, ಗೌರವಾನ್ವಿತ ಅತಿಥಿಗಳಾಗಿ ದಕ್ಷಿಣ ಕನ್ನಡ ಹೆಗ್ಗಡೆ ಸಮಾಜ ಸಂಘ ಜೊತೆ ಕಾರ್ಯದರ್ಶಿ ಶಿವರಾಮ್‌ ಹೆಗ್ಡೆ ಬೆಳುವಾಯಿ, ಹೆಗ್ಗಡೆ ಸೇವಾ ಸಂಘ ಬೆಂಗಳೂರು ಕೋಶಾಧಿಕಾರಿ ವಿಕಾಸ್‌ ಹೆಗ್ಡೆ ಅವರು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ವಾರ್ಷಿಕ ಜೀವನ ಶ್ರೇಷ್ಠ ಪ್ರಶಸ್ತಿಯನ್ನು ಹೆಗ್ಗಡೆ ಸೇವಾ ಸಂಘ ಮುಂಬಯಿ ಇದರ ಮಾಜಿ ಜೊತೆ ಕಾರ್ಯದರ್ಶಿ ಆರ್‌. ಜಿ. ಹೆಗ್ಡೆ ಮುಲುಂಡ್‌ ಅವರಿಗೆ ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಲಾಯಿತು.

ಹೆಗ್ಗಡೆ ಸೇವಾ ಸಂಘದ ಹಿರಿಯ ಸದಸ್ಯರುಗಳಾದ ರಾಘವ ಟಿ. ಹೆಗ್ಡೆ ರೆಂಜಾಳ, ಸಂಜೀವ ಹೆಗ್ಡೆ ಸಾಗಿನಬೆಟ್ಟು ಮುಲುಂಡ್‌ ಅವರನ್ನು ಗೌರವಿಸಲಾಯಿತು. ಸಂಜೆ ಸದಸ್ಯ ಬಾಂಧವರಿಂದ, ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ವೈವಿಧ್ಯ ಹಾಗೂ ರಾತ್ರಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

Advertisement

ಸಂಘದ ಗೌರವಾಧ್ಯಕ್ಷ ಆನಂದ್‌ ಹೆಗ್ಡೆ ಚೆಂಬೂರು, ಅಧ್ಯಕ್ಷ ಶಂಕರ್‌ ಆರ್‌. ಹೆಗ್ಡೆ, ಉಪಾಧ್ಯಕ್ಷ ಮನೋಜ್‌ ಕುಮಾರ್‌ ಎಲ್‌. ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ರವಿ ಎಸ್‌. ಹೆಗ್ಡೆ, ಜತೆ ಕಾರ್ಯದರ್ಶಿ ದಯಾನಂದ್‌ಬಿ. ಹೆಗ್ಡೆ, ಗೌರವ ಪ್ರಧಾನ ಕೋಶಾಧಿಕಾರಿ ಶಶಿಧರ ಎಸ್‌. ಹೆಗ್ಡೆ, ಜತೆ ಕೋಶಾಧಿಕಾರಿ ಮಂಜುನಾಥ್‌ ಎಂ. ಹೆಗ್ಡೆ, ಕ್ರೀಡಾ ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್‌ ಆರ್‌. ಹೆಗ್ಡೆ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ರಾಜೇಶ್‌ ಆರ್‌. ಹೆಗ್ಡೆ, ಮೆಂಟೆನೆನ್ಸ್‌ ಸಮಿತಿಯ ಕಾರ್ಯಾಧ್ಯಕ್ಷ ಮನೋಹರ ಸಿ. ಹೆಗ್ಡೆ, ಕ್ಯಾಟರಿಂಗ್‌ ಸಮಿತಿಯ ಕಾರ್ಯಾಧ್ಯಕ್ಷ ಸಂತೋಷ್‌ ಆರ್‌. ಹೆಗ್ಡೆ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಗಣೇಶ್‌ ಎಸ್‌. ಹೆಗ್ಡೆ, ಸದಸ್ಯತ್ವ ನೋಂದಣಿ ಸಮಿತಿಯ ಕಾರ್ಯಾಧ್ಯಕ್ಷ ಭಾರತಿ ಎಂ. ಹೆಗ್ಡೆ, ಇನ್‌ಫಾರ್ಮೆಶನ್‌ ಆ್ಯಂಟ್‌ ಟೆಕ್ನಾಲಜಿ ಇದರ ಕಾರ್ಯಾಧ್ಯಕ್ಷ ಶಂಕರ್‌ ಎಸ್‌. ಹೆಗ್ಡೆ ಮುಲುಂಡ್‌, ಯುವ ವಿಭಾಗದ ಕಾರ್ಯಾಧ್ಯಕ್ಷ ಅಭಿಷೇಕ್‌ ಹೆಗ್ಡೆ, ಕಚೇರಿಯ ಆಡಳಿತಗಾರ್ತಿ ಗೀತಾ ಡಿ. ಹೆಗ್ಡೆ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಸುರೇಂದ್ರ ಕುಮಾರ್‌ ಹೆಗ್ಡೆ, ವಿಜಯ ಬಿ. ಹೆಗ್ಡೆ, ಜಯರಾಮ್‌ ಹೆಗ್ಡೆ ಕಲ್ಯಾಣ್‌, ಹರೀಶ್‌ಕುಮಾರ್‌ ವಿ. ಹೆಗ್ಡೆ, ಜಯರಾಮ್‌ ಎಂ. ಹೆಗ್ಡೆ ಥಾಣೆ, ಕರುಣಾಕರ ಪಿ. ಹೆಗ್ಡೆ, ಪ್ರಭಾವತಿ ಜೆ. ಹೆಗ್ಡೆ, ಯುವ ವಿಭಾಗದ ಸದಸ್ಯರುಗಳಾದ ಅರುಣ್‌ ಎಸ್‌. ಹೆಗ್ಡೆ, ಚಂದ್ರಹಾಸ್‌ ಎನ್‌. ಹೆಗ್ಡೆ, ನಿತಿನ್‌ ಎಂ. ಹೆಗ್ಡೆ, ಸಂತೋಷ್‌ ಎಸ್‌. ಹೆಗ್ಡೆ, ಸಾಗರ್‌ ಬಿ. ಹೆಗ್ಡೆ, ರಾಹುಲ್‌ ಜೆ. ಹೆಗ್ಡೆ, ಶ್ರೀನಿಧಿ ಎಂ. ಹೆಗ್ಡೆ, ವಿಶ್ಮಾ ವಿ. ಹೆಗ್ಡೆ, ನೇಹಾ ಎಸ್‌. ಹೆಗ್ಡೆ, ಪವಿತ್ರಾ ಎಸ್‌. ಹೆಗ್ಡೆ ಅವರು ಉಪಸ್ಥಿತರಿದ್ದರು.

 

ಚಿತ್ರ-ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next