Advertisement

ಅರ್ಧಕ್ಕೆ ನಿಂತ ಕಾಮಗಾರಿ,ಅಪಾಯದ ಅಂಚಿನಲ್ಲಿ ಸಂಚಾರ

12:30 AM Feb 02, 2019 | Team Udayavani |

ಹೆಬ್ರಿ : ಹೆಬ್ರಿ ಲಯನ್ಸ್‌ ಸರ್ಕಲ್‌ನಿಂದ ಮೂರು ರಸ್ತೆ ಮಾರ್ಗವಾಗಿ ಹೆಬ್ರಿಗೆ ಸಂಪರ್ಕಿಸುವ ರಸ್ತೆಯ ಆಗಲಿಕರಣದ  ಕೆಲಸ ಕಳೆದ ಹಲಾವರು ತಿಂಗಳುಗಳಿಂದ ನಡೆಯುತ್ತಿದ್ದು ಇದೀಗ ಗ್ಯಾರೇಜ್‌ ಎದುರಿನ ರಸ್ತೆಯ ಅಗಲೀಕರಣಕ್ಕೆ ಇಕ್ಕೆಲೆಗಳನ್ನು  ಅಗೆತಗೊಳಿಸಿದ್ದು ಖಾಸಗಿ ಜಾಗದ ತಕರಾರಿನಿಂದಾಗಿ ಕಾಮಗಾರಿ ಸ್ಥಗಿತಗೊಂಡಿದೆ.

Advertisement

ಪರಿಣಾಮ ಮಾರ್ಗದ ಸಂಚಾರ ಆಪಾಯದ ಅಂಚಿನಲ್ಲಿದ್ದು ಪಾದಚಾರಿಗಳು ನಡೆಯಲು ಪುಟ್‌ಪಾತ್‌ಇಲ್ಲದೆ ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಮಾರ್ಗದ ಲ್ಲಿ ಈಗಾಗಲೇ ದಿನನಿತ್ಯ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಕಾರ್ಮಿಕರು ಈ ಮಾರ್ಗದಲ್ಲಿ ನಡೆದುಕೊಂಡು ಹೋಗುತಿದ್ದು ಹಿಂಬದಿಯಿಂದ ವಾಹನ ಸವಾರರು ಒಮ್ಮೆಲೆ ಬಂದು ಡಿಕ್ಕಿ ಹೊಡೆದ ಹಲವಾರು ಪ್ರಕರಣಗಳು ನ‌ಡೆದಿದೆ.ರಾತ್ರಿಯ ಹೊತ್ತು ವಾಹನ ಸವಾರರು ರಸ್ತೆಯ ಚರಂಡಿ ಕಾಣದೆ ಕಂದಕಕ್ಕೆ ಉರುಳುವ ಭೀತಿಯಲ್ಲಿದೆ.ಇನ್ನಾದರು ಸಂಬಂಧಪಟ್ಟ ಇಲಾಖೆ ಸಮಸ್ಯೆಯನ್ನು ಪರಿಹರಿಸಿ ಮುಂದಾಗುವ ಅನಾಹುತವನ್ನು  ತಪ್ಪಿಸುವಂತೆ  ಸಾರ್ವಜನಿಕರು ವಿನಂತಿಸುತ್ತಾರೆ.

ರಸ್ತೆಯ ಬದಿಯಲ್ಲಿರುವ ಜಾಗ ಖಾಸಗಿ ಅವರ ಒಡೆತನಕ್ಕೆ ಒಳಪಟ್ಟಿದ್ದು ಈ ಕಾರಣದಿಂದ ಕಾಮಗಾರಿ ನಿಂತಿದೆ. ಅವರೊಂದಿಗೆ ಪಂಚಾಯತ್‌ನಲ್ಲಿ ಒಮ್ಮೆ ಮಾತುಕತೆ ನಡೆಸಿದ್ದು ಒಪ್ಪಿಗೆ ನೀಡಿದ್ದಾರೆ.ಆದರೆ ಈಗ ಆಗುವುದಿಲ್ಲ ಎನ್ನುತ್ತಾರೆ.ಈ ಬಗ್ಗೆ ಶಾಸಕರ ಗಮನಕ್ಕೆ ತಂದಿದ್ದು ಅವರೂ ಕೂಡ ಮಾತುಕತೆ ನಡೆಸಿದ್ದು ಮುಂದಿನ ನಿರ್ಧಾರ ತಿಳಿಯಬೇಕಾಗಿದೆ.
– ಹೆಚ್‌.ಕೆ.ಸುಧಾಕರ
 ಅಧ್ಯಕ್ಷರು, ಗ್ರಾಮ ಪಂಚಾಯತ್‌ ಹೆಬ್ರಿ

Advertisement

Udayavani is now on Telegram. Click here to join our channel and stay updated with the latest news.

Next