Advertisement

ಮುಂಬಯಿ ಮಹಾ ಮಳೆಗೆ ವಿರಾಮ; ಜನಜೀವನ ಮಾಮೂಲಿಗೆ

12:19 PM Jul 11, 2018 | Team Udayavani |

ಮುಂಬಯಿ : ಮುಂಬಯಿ ಮಹಾನಗರದಲ್ಲಿ ಕಳೆದ ಮೂರು ದಿನಗಳಿಂದ ಆಗುತ್ತಿದ್ದ ಭಾರೀ ಮಳೆ ಇಂದು ವಿರಾಮ ಪಡೆದುಕೊಂಡಿರುವುದರಿಂದ ಮುಂಬಯಿಗರಿಗೆ ಸ್ವಲ್ಪಮಟ್ಟಿನ ರಿಲೀಫ್ ಸಿಕ್ಕಿದಂತಾಗಿದೆ.

Advertisement

ಮಳೆ ನಿಂತಿರುವ ಕಾರಣ ಹೊರ ವಲಯದ ರೈಲುಗಳ ಓಡಾಟ ಇಂದು ಎಂದಿನಂತೆ ಸಾಗಿದೆ. ಪಶ್ಚಿಮ ರೈಲ್ವೆಯ ಒಂದು ಭಾಗ ನಿನ್ನೆಯ ನೆರೆಗೆ ತೀವ್ರವಾಗಿ ಹಾನಿಗೊಂಡಿತ್ತು. ಹಾಗಾಗಿ ಲೋಕಲ್‌ ಟ್ರೈನ್‌ ಸೇವೆ ಬಾಧಿತವಾಗಿತ್ತು. ಇಂದು ನಿಧಾನವಾಗಿ ಎಲ್ಲವೂ ಸುಸ್ಥಿಗೆ ಮರಳುತ್ತಿರುವುದು ಕಂಡು ಬರುತ್ತಿದೆ. ಲೋಕಲ್‌ ಟ್ರೈನ್‌ಗಳು ಇಂದು ಬೆಳಗ್ಗಿನಿಂದಲೇ ತುಂಬಿದ ಪ್ರಯಾಣಿಕರಿಂದ ಓಡಾಡಲು ಆರಂಭಿಸಿವೆ. 

ವೆಸ್ಟರ್ನ್ ರೈಲು ಹಳಿಗಳು ಕೆಲವು ಭಾಗಗಳಲ್ಲಿ ಇನ್ನೂ ನೀರಿನಲ್ಲಿ ಮುಳುಗಿರುವುದು ಈ ಮಾರ್ಗದಲ್ಲಿನ ಲೋಕಲ್‌ ಟ್ರೈನ್‌ ಸೇವೆ ನಿರ್ಬಂಧಿತವಾಗಿದೆ. ಸರಿ ಇರುವ ಮಾರ್ಗದಲ್ಲಿ ರೈಲಿನ ಗತಿಯನ್ನು ನಿಧಾನಗೊಳಿಸಲಾಗುತ್ತಿದೆ. 

ಮುಖ್ಯ ರಸ್ತೆಗಳಲ್ಲಿ ಇಂದು ವಾಹನ ಸಂಚಾರ ಮತ್ತೆ ಮಾಮೂಲಿ ಸ್ಥಿತಿಗೆ ಮರಳಿದೆ. ಕಳೆದ ಕೇವಲ 10 ದಿನಗಳಲ್ಲಿ ಮುಂಬಯಿಯಲ್ಲಿ 864.50 ಮಿ.ಮೀ. ಮಳೆಯಾಗಿದೆ. ಇದು ತಿಂಗಳು ಪೂರ್ತಿ ಆಗುವ ಮಳೆಯ ಪ್ರಮಾಣಕ್ಕೆ ಸಮವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next