Advertisement

ಭಾರೀ ಮಳೆ: ಆಗುಂಬೆ ಘಾಟಿಯಲ್ಲಿ ಮತ್ತೆ ಕುಸಿತ ಭೀತಿ

10:20 PM Jul 11, 2022 | Team Udayavani |

ಶಿವಮೊಗ್ಗ: ಸೋಮವಾರ ಸಂಜೆಯಿಂದ ಹೊಸನಗರ ತೀರ್ಥಹಳ್ಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾಶಯಗಳ ಒಳಹರಿವು ಹೆಚ್ಚಿದೆ. ಸೋಮವಾರ ಶಾಲೆಗಳು ಆರಂಭವಾಗಿದ್ದರೂ ಮಳೆ ನಿಲ್ಲದ ಕಾರಣ ಮತ್ತೆ ರಜೆ ನೀಡಲಾಗಿದೆ.

Advertisement

ಆಗುಂಬೆ ಘಾಟಿಯಲ್ಲೂ ಮಳೆ ಮುಂದುವರಿದಿದ್ದು, ಜು.1ರಿಂದ ಇಲ್ಲಿವರೆಗೆ 2300 ಮಿಮೀ ಮಳೆಯಾಗಿದೆ. ಘಾಟಿಯ ಕೆಲವು ಭಾಗಗಳಲ್ಲೂ ಕುಸಿತ ಸಂಭವಿಸುವ ಆತಂಕ ಶುರುವಾಗಿದೆ.

ಅಲ್ಲದೆ, ಸೂರ್ಯಾಸ್ತ ವೀಕ್ಷಣ ಗೋಪುರದ ಬಳಿ ಕಳೆದ ವಾರ ಸಣ್ಣ ಪ್ರಮಾಣದ ಕುಸಿತ ಕಂಡಿತ್ತು. ಅದನ್ನು ಸಿಮೆಂಟ್‌ ಚೀಲಗಳನ್ನು ಹಾಕಿ ಬಂದೋಬಸ್ತ್ ಮಾಡಲಾಗಿದೆ. ಘಾಟಿಯಲ್ಲಿ ಮತ್ತೆ ಕುಸಿತ ಸಂಭವಿಸಿದರೆ ಜನರಿಗೆ ತೊಂದರೆಯಾಗುವುದು ನಿಶ್ಚಿತ.

ಗುಡ್ಡ ಕುಸಿದು ಘಾಟಿಯಲ್ಲಿ ಸಂಚಾರ ಸ್ಥಗಿತಗೊಂಡಿರುವ ಪರಿಣಾಮ ಆರು ಗ್ರಾ.ಪಂ. ವ್ಯಾಪ್ತಿಯ ಅನೇಕ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ಬಸ್‌ಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸುತ್ತಿರುವುದು ಇದಕ್ಕೆ ಕಾರಣ.

Advertisement

Udayavani is now on Telegram. Click here to join our channel and stay updated with the latest news.

Next