Advertisement

ಸುಬ್ರಹ್ಮಣ್ಯದಲ್ಲಿ ಗುಡುಗು ಸಹಿತ ಭಾರೀ ಮಳೆ

10:25 AM May 24, 2020 | sudhir |

ಮಂಗಳೂರು/ಉಡುಪಿ: ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಇರುವ ಕಾರಣ ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಶನಿವಾರ ಮಳೆಯಾದ ವರದಿಯಾಗಿದೆ. ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆ ಗಾಳಿ, ಗುಡುಗು ಸಹಿತ ಭಾರೀ ಮಳೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಎಲ್ಲಿಯೂ ಮಳೆಯಾದ ಸುದ್ದಿಯಿಲ್ಲ.

Advertisement

ಸುಬ್ರಹ್ಮಣ್ಯದ ದೀಪಕ್‌ ಎಚ್‌.ಪಿ. ಎಂಬವರ ವಸತಿಗೃಹದ ಸೋಲಾರ್‌, ವಾಟರ್‌ ಹೀಟರ್‌ ಪೆನಲ್‌ ಸಹಿತ ಗಾಲಿಗೆ ನೆಲಕ್ಕುರುಳಿ ಹಾನಿಯಾಗಿದ್ದು ಸುಮಾರು ಎರಡು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ. ಸುಬ್ರಹ್ಮಣ್ಯ ಪರಿಸರದ ಹರಿಹರ, ಏನೆಕಲ್ಲು, ಪಂಜ, ಗುತ್ತಿಗಾರು, ಆಸುಪಾಸಿನಲ್ಲಿ ಗಾಳಿ ಗುಡುಗು ಸಹಿತ ಸುಮಾರು ಒಂದು ತಾಸು ಉತ್ತಮ ಮಳೆಯಾಗಿದೆ.

ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕಕ್ಕಿಂಜೆ, ನೆರಿಯಾ ಸೇರಿದಂತೆ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಮಳೆ ಯಾಗಿದೆ. ಮಂಗಳೂರು ನಗರದಲ್ಲಿ ಬೆಳಗ್ಗೆ ಯಿಂದ ಬಿಸಿಲು ಮತ್ತು ಸೆಕೆ ಯಿಂದ ಕೂಡಿದ ವಾತಾವರಣ ಇತ್ತು. ಸಂಜೆ ವೇಳೆ ಮೋಡ ಕವಿದ ವಾತಾವರಣ ಇತ್ತು.

ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ ಶನಿವಾರ ದಂದು ಪಣಂಬೂರಿನಲ್ಲಿ 35.1 ಡಿ.ಸೆ. ಗರಿಷ್ಠ ಮತ್ತು 27 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next