Advertisement

ಮೂಳೂರು : ತೀವ್ರ ಕಡಲ್ಕೊರೆತದಿಂದ ಹತ್ತಾರು ತೆಂಗಿನಮರಗಳು ಕಡಲಿಗೆ ಆಹುತಿ

06:42 PM Jun 20, 2021 | Team Udayavani |

ಕಾಪು : ಮಳೆಯ ತೀವ್ರತೆ ಹೆಚ್ಚಾಗುತ್ತಿದ್ದಂತೆಯೇ ಕರಾವಳಿ ತೀರದಲ್ಲಿ ಸಮುದ್ರದ ಆರ್ಭಟ ಹೆಚ್ಚಾಗಿದ್ದು, ಮೂಳೂರು ತೊಟ್ಟಂ ಪರಿಸರದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ.

Advertisement

ಕಾಪು ಪುರಸಭಾ ವ್ಯಾಪ್ತಿಯ ವಾರ್ಡ್ ನಂಬರ್ 13 ತೊಟ್ಟಂ ಸಮೀಪದಲ್ಲಿ ಕಡಲಿನ ಅಬ್ಬರ ರಭಸಗೊಳ್ಳುತ್ತಿದ್ದು ಹತ್ತಾರು ತೆಂಗಿನ ಮರಗಳು ಕಡಲ ಒಡಲು ಸೇರುತ್ತಿವೆ.

ಮೂಳೂರು ತೊಟ್ಟಂ ಪರಿಸರದ ಸುಮಾರು 2 ಕಿಲೋ ಮೀಟರ್ ಉದ್ದದಲ್ಲಿ ಜನ ವಸತಿ ಪ್ರದೇಶದಲ್ಲಿ ಕಡಲ್ಕೊರೆತವಾಗುತ್ತಿದ್ದು, ತುರ್ತು ತಡೆಗೋಡೆ ನಿರ್ಮಿಸುವಂತೆ ಸ್ಥಳಿಯರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next