Advertisement

ಹರಪನಹಳ್ಳಿ: ಭಾರಿ ಮಳೆಗೆ ಪ್ರಮುಖ ರಸ್ತೆಗಳು ಜಲಾವೃತ

01:51 PM May 19, 2020 | mahesh |

ಹರಪನಹಳ್ಳಿ: ತಾಲೂಕಿನಲ್ಲಿ ಭಾನುವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಪಟ್ಟಣ ಸೇರಿದಂತೆ ಬಹುತೇಕ ರಸ್ತೆಗಳು ಜಲಾವೃತಗೊಂಡಿವೆ. ಕೆಲವೆಡೆ ಮನೆ ಮೇಲ್ಛಾವಣೆ ಹಾರಿ ಹೋಗಿದ್ದು ಅರಸೀಕೆರೆ ಹೋಬಳಿಯ ಗಡಿಗುಡಾಳು ಗ್ರಾಮದಲ್ಲಿ 15 ಮನೆಗಳಿಗೆ ನೀರು ನುಗ್ಗಿದೆ. ಸೋಮವಾರ ಬೆಳಗ್ಗೆ 4 ಗಂಟೆ ಸಮಯದಲ್ಲಿ ಶುರುವಾದ ಮಳೆ ಸತತವಾಗಿ ಮೂರು ತಾಸು ಸುರಿದೆ. ಪರಿಣಾಮ ಪಟ್ಟಣದ ಪ್ರಮುಖ ರಸ್ತೆ, ಚರಂಡಿಗಳು, ಕೋಟೆ ಹನುಮಪ್ಪ ದೇವಸ್ಥಾನ, ರೇಣುಕಾ ಕಲ್ಯಾಣ ಮಂಟಪ ರಸ್ತೆ, ಕೊಟ್ಟೂರು ರಸ್ತೆ, ತೆಗ್ಗಿನಮಠ, ಬಿಎಸ್‌ಎನ್‌ಎಲ್‌ ಕಚೇರಿ, ದೂರದರ್ಶನ ಕೇಂದ್ರ, ಸಾರ್ವಜನಿಕ ಗ್ರಂಥಾಲಯ, ಡಿವೈಎಸ್‌ಪಿ ಕಚೇರಿ, ಕಾರ್‌ ಸ್ಟ್ಯಾಂಡ್‌, ಬಸ್‌ ನಿಲ್ದಾಣ, ಇನ್ನಿತರ ತಗ್ಗು ಪ್ರದೇಶದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡವು.

Advertisement

ಪಟ್ಟಣದ ವಾಲ್ಮೀಕಿ ನಗರ, ಕೊಟ್ಟೂರು ಆಶ್ರಯ ಕಾಲೋನಿ, ಆಂಜನೇಯ ಬಡಾವಣೆ, ಗೋಕರ್ಣೇಶ್ವರ ದೇವಸ್ಥಾನದ ಆವರಣದೊಳಗೆ ನೀರು ನುಗ್ಗಿತು. ಆದರೆ ಯಾವುದೇ ಹಾನಿ
ಸಂಭವಿಸಿಲ್ಲ. ಸತತ 3 ಗಂಟೆಗೆಗೂ ಹೆಚ್ಚು ಸಮಯ ಮಳೆ ಬಿದ್ದ ಪರಿಣಾಮ ಪಟ್ಟಣದ ಹೊಂಡ, ಗುಂಡಿ, ರಸ್ತೆಯ ಇಕ್ಕೆಲಗಳಲ್ಲಿ ನೀರು ನಿಂತುಕೊಂಡಿತು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ನಗರದ ಎಲ್ಲ ರಸ್ತೆಗಳಲ್ಲಿ ನೀರು ಹರಿಯುವ ದೃಶ್ಯ ಕಂಡು ಬಂತು. ಕೆಲವು ಕಡೆಗಳಲ್ಲಿ ರಸ್ತೆಯಲ್ಲೇ ನೀರು ನಿಂತ್ತಿರುವುದರಿಂದ ಸಂಚಾರಕ್ಕೆ ತೊಡಕು ಉಂಟು ಮಾಡಿತು. ಪಾದಾಚಾರಿಗಳು, ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು. ಗಾಳಿಗೆ ಕೆಲವು ಕಡೆಗಳಲ್ಲಿ ಮನೆ ಮೇಲ್ಛಾವಣೆ ಹಾರಿ ಹೋಗಿವೆ. ಅರಸೀಕೆರೆ ಹೋಬಳಿಯ ಗಡಿಗುಡಾಳು ಗ್ರಾಮದಲ್ಲಿ 15 ಮನೆಗಳಿಗೆ
ನೀರು ನುಗ್ಗಿದೆ. ಹರಪನಹಳ್ಳಿ ಕಸಾಬಾ-84.4 ಮೀ.ಮೀ, ಅರಸೀಕೇರಿ ಹೋಬಳಿ-70.2,. ಚೀಗಟೇರಿ ಹೋಬಳಿ-30, ಹಿರೆಮೇಗಳಗೇರಿ-20, ಉಚ್ಚಂಗಿದುರ್ಗ-33.8, , ತೆಲಿಗಿ 18.2, ಹಲವಾಗಲು 48.2 ಮೀ.ಮೀ ಮಳೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next