Advertisement

ಬೆಳ್ತಂಗಡಿ ತಾಲೂಕಿನಾದ್ಯಂತ ಸತತ ಮೂರನೇ ದಿನ ಮಳೆ

01:07 AM Jan 06, 2021 | Team Udayavani |

ಮಂಗಳೂರು/ಉಡುಪಿ: ಬೆಳ್ತಂಗಡಿ ತಾಲೂಕಿನಾದ್ಯಂತ ಸತತ ಮೂರು ದಿನಗಳಿಂದ ಸಂಜೆ ಮಳೆ ಸುರಿದಿದ್ದು, ಅಕಾಲಿಕ ಮಳೆಯಿಂದಾಗಿ ಕೃಷಿ ಚಟುವಟಿಕೆಗಳಿಗೆ ಸಮಸ್ಯೆಯಾಗಿದೆ.

Advertisement

ಮಂಗಳವಾರ ಸಂಜೆ ಮಿಂಚು, ಗುಡುಗು ಸಹಿತ ಅರ್ಧ ತಾಸಿಗೂ ಅಧಿಕ ಸಮಯ ತಾಲೂಕಿನ ಅರಸಿನಮಕ್ಕಿ, ಶಿಬಾಜೆ, ಶಿಶಿಲ, ನೆರಿಯ, ಧರ್ಮಸ್ಥಳ, ಮದ್ದಡ್ಕ, ಗೇರುಕಟ್ಟೆ, ಮುಂಡಾಜೆ, ಬೆಳ್ತಂಗಡಿ ಪೇಟೆ ಸಹಿತ ಬಹುತೇಕ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ರವಿವಾರವೂ ಉತ್ತಮ ಮಳೆಯಾಗಿದ್ದು ಸೋಮವಾರ ಸಾಧಾರಣ ಹನಿ ಮಳೆಯಾಗಿತ್ತು. ಮಂಗಳವಾರ ಮತ್ತೆ ಉತ್ತಮ ಮಳೆಯಾಗಿದೆ.

ಬಂಟ್ವಾಳ, ನಾವೂರು, ಪುತ್ತೂರು, ಉಪ್ಪಿನಂಗಡಿ, ಕಲ್ಲೇರಿ, ಕರಾಯ, ಕುಕ್ಕೆ ಸುಬ್ರಹ್ಮಣ್ಯ ಪರಿಸರ, ಕಡಬ ತಾಲೂಕಿನ ನೂಜಿಬಾಳ್ತಿಲ, ಇಚ್ಲಂಪಾಡಿ, ಕಡ್ಯ ಕೊಣಾಜೆ, ಬಿಳಿನೆಲೆಗಳಲ್ಲಿ ಗುಡುಗು ಸಹಿತ ಉತ್ತಮ ಮಳೆ ಸುರಿದಿದೆ.

ಉಡುಪಿ ಜಿಲ್ಲೆಯ ಸಿದ್ದಾಪುರ ಪರಿಸರದಲ್ಲಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ.

ಸಿಡಿಲು ಬಡಿದು ಹಾನಿ
ಕಡಬ: ಮಂಗಳವಾರ ಸಂಜೆ ಮಳೆ ಸುರಿಯುತ್ತಿದ್ದ ಸಂದರ್ಭ ಕೊಂಬಾರು ಗ್ರಾಮದ ಬೀಡುಮಜಲು ನಿವಾಸಿ ಕರಿಯ ಮುಗೇರ ಅವರ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ವಿದ್ಯುತ್‌ ವಯರಿಂಗ್‌ ಸಂಪೂರ್ಣ ಸುಟ್ಟುಹೋಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next