Advertisement

ಮಂಡ್ಯ : ಭಾರಿ ಮಳೆಗೆ ಮನೆಯ ಗೋಡೆ ಕುಸಿತ : ಪ್ರಾಣಾಪಾಯದಿಂದ ಪಾರಾದ ಕುಟುಂಬ

01:32 PM Aug 27, 2022 | Team Udayavani |

ಮಂಡ್ಯ : ಶುಕ್ರವಾರ ರಾತ್ರಿಯಿಂದ ಜಿಲ್ಲೆಯಾದ್ಯಂತ ಭಾರಿ ಮಳೆಯಾಗುತ್ತಿದ್ದು ಪರಿಣಾಮ ಹೊಸ ಬೂದನೂರು ಗ್ರಾಮದಲ್ಲಿ ಮನೆಯ ಗೋಡೆ ಕುಸಿದು ಬಿದ್ದಿದ್ದು ಅದೃಷ್ಟವಶಾತ್ ಕುಟುಂಬ ಸದಸ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Advertisement

ಮಂಡ್ಯ ತಾಲ್ಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು ರಾತ್ರಿ ಮನೆಯ ಒಂದು ಪಾರ್ಶ್ವ ಕುಸಿದು ಹೋಗಿದ್ದು ಮನೆಮಂದಿ ಸೂರು ಕಳೆದುಕೊಂಡು ಕಂಗಾಲಾಗಿದ್ದಾರೆ.
ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಬಡ ಮಹಿಳೆ ಕೆಂಪಮ್ಮ ಸರಕಾರದ ವಿರುದ್ಧ ಹಿಡಿ ಶಾಪ ಹಾಕಿದ್ದಾರೆ, ಬಡವರಿಗೆ ಮನೆ ಕೊಡಲು ಜನ ಪ್ರತಿನಿಧಿಗಳಿಗೆ ಏನಾಗಿದೆ.? ಮನೆ ಗೊಡೆ ಕುಸಿದಿದೆ, ಬಾಡಿಕೆ ಮನೆಯಲ್ಲಿ ವಾಸ ಮಾಡ್ತಿದ್ದೇನೆ. ಮನೆ ಕುಸಿದು ವನವಾಸ ಅನುಭವಿಸುತ್ತಿದ್ದೇವೆ. ಬಡವರ ಪರ ಯಾರು ಬರ್ತಿಲ್ಲ, ಓಟ್ ಕೇಳಲು ಮಾತ್ರ ಬರ್ತಾರೆ ಎಂದು ಸರಕಾರದ ವಿರುದ್ಧ ಗದರಿದ್ದಾರೆ.

ಮನೆ ಬಿದ್ದ ಸಮಯದಲ್ಲಿ ನಮ್ಮ ಪ್ರಾಣ ಹೋಗಿದ್ರೆ ಏನು ಗತಿ. ನಮ್ಮ ಮಕ್ಕಳ ಗತಿ ಏನು ಓಟು ಕೇಳುವಾಗ ಬಡವರ ಪರ ಅಂತಾರೆ, ಇವಾಗ ಯಾರು ದಿಕ್ಕಿಲ್ಲ ಎಂದು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕಿದ್ದಾರೆ.

ಇದನ್ನೂ ಓದಿ : ಮಂಜೂರಾತಿ ಇಲ್ಲದೇ ಟೆಂಡರ್‌: ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ

Advertisement

Udayavani is now on Telegram. Click here to join our channel and stay updated with the latest news.

Next